ಆಂಧ್ರದಲ್ಲಿ ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ಐವರ ಸಹಿತ 6 ಮಂದಿಯ ದುರ್ಮರಣ

11:16 PM, Tuesday, January 19th, 2016
Share
1 Star2 Stars3 Stars4 Stars5 Stars
(5 rating, 6 votes)
Loading...
Andra Accident

ಕಾಸರಗೋಡು: ಆಂಧ್ರಪ್ರದೇಶದಲ್ಲಿ ಸೋಮವಾರ ಮುಂಜಾನೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮುಳ್ಳೇರಿಯಾ ಸಮೀಪದ ದೇಲಂಪಾಡಿ ಬಳಿಯ ನಿವಾಸಿಗಳಾದ ಒಂದೇ ಕುಟುಂಬದ ಐವರ ಸಹಿತ ಆಂಧ್ರ ನಿವಾಸಿ ಮೃತಪಟ್ಟ ದಾರುಣ ಘಟನೆ ನಡೆದಿದೆ.

ದೇಲಂಪಾಡಿ ಸಮೀಪದ ಊಜಮಪಾಡಿ ನಿವಾಸಿಗಳಾದ ದೇವಸ್ಯ(65),ಪತ್ನಿ ತ್ರೇಸಿ(62),ಇವರ ಪುತ್ರ ರೋಬಿನ್(38),ಪತ್ನಿ ಬಿಸ್‌ಮೋಳ್(29) ಹಾಗೂ ನಾಲ್ಕು ತಿಂಗಳ ಮಗು ಅಪಘಾತದಲ್ಲಿ ಮೃತರಾದರು.ಕಾರು ಚಾಲಕ ಆಂಧ್ರ ನಿವಾಸಿ ಪವನ್ ಎಂಬವರೂ ಘಟನೆಯಲ್ಲಿ ಮೃತರಾಗಿದ್ದಾರೆ.

ಊಜಂಪಾಡಿಯ ದೇವಸ್ಯ,ಪತ್ನಿ ತ್ರೇಸಿ ಹಾಗೂ ಇವರ ಇನ್ನೋರ್ವ ಪುತ್ರ ರಿನಿಶ್ ಕಳೆದ 30 ವರ್ಷಗಳಿಂದ ಊಜಂಪಾಡಿಯಲ್ಲಿ ವಾಸಿಸುತ್ತಿದ್ದಾರೆ.ರೋಬಿನ್ ಹಾಗೂ ಬಿಸ್‌ಮೋಳ್ 15 ವರ್ಷಗಳಿಂದ ತೆಲಂಗಾಣದಲ್ಲಿ ವಾಸಿಸುತ್ತಿದ್ದು,ಶಾಲೆಯೊಂದನ್ನು ನಡೆಸುತ್ತಿದ್ದರು. ಆಂಧ್ರಪ್ರದೇಶದ ಹೈದರಾಬಾದ್ ನಿಂದ 40 ಕೀ.ಮೀ ದೂರದ ಮೆಹಬೂಬಾ ನಗರದಲ್ಲಿ ಅಪಘಾತ ನಡೆದಿದೆ.ಕುಟುಂಬ ಸಂಚರಿಸುತ್ತಿದ್ದ ಕಾರು ರಸ್ತೆ ಬದಿಯ ಮೋರಿ ಸಂಕಕ್ಕೆ ಡಿಕ್ಕಿಯಾಗಿ ಮುಗುಚಿ ಬಿದ್ದಿದ್ದು, ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಅಪಘಾತದಿಂದ ಕಾರಲ್ಲಿದ್ದವರು ತಕ್ಷಣ ಅಸುನೀಗಿದರೆಂದು ತಿಳಿದುಬಂದಿದೆ. ಚಾಲಕ ನಿದ್ದೆಯ ಮಂಪರಲ್ಲಿದ್ದುದೇ ಅಪಘಾತಕ್ಕೆ ಕಾರಣವೆನ್ನಲಾಗಿದೆ. ರೋಬಿನ್ ರ ಮಗುವಿನ ದೇವತಾ ಪುಣ್ಯ ಕಾರ್ಯಕ್ಕಾಗಿ ಕುಟುಂಬ ಇತ್ತೀಚೆಗೆ ಕೋಟ್ಟಯಂ ಗೆ ಬಂದಿತ್ತು. ಕೋಟ್ಟಯಂ ನಲ್ಲಿರುವ ರೋಬಿನ್ ರ ಪತ್ನಿ ಮನೆಯಲ್ಲಿ ಕಾರ್ಯಕ್ರಮ ನಡೆಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಊಜಂಪಡಿಯಿಂದ ದೇವಸ್ಯ ಹಾಗೂ ಪತ್ನಿ ತ್ರೇಸಿ ತೆರಳಿದ್ದರು.ಕಾರ್ಯಕ್ರಮದ ಬಳಿಕ ರೋಬಿನ್ ರ ಜೊತೆ ತಂದೆ,ತಾಯಿಗಳು ಆಂಧ್ರಕ್ಕೆ ತೆರಳಿದ್ದರು.ಇವರು ಆಂಧ್ರದ ಮೂಲಕ ತೆಲಂಗಣಕ್ಕೆ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ.ದೇವಸ್ಯರ ಇನ್ನೋರ್ವ ಪುತ್ರ ರಿನಿಶ್ ಹಾಗೂ ಅವರ ಪತ್ನಿ ಅಬಿದಿ ಊಜಂಪಾಡಿಯಲ್ಲಿ ವಾಸಿಸುತ್ತಿದ್ದಾರೆ.ಮೃತ ದೇವಸ್ಯ ಇನ್ನೋರ್ವ ಪುತ್ರ ರಿನೀಶ್ ಸಹೋದರ ತೋಮಚ್ಚನ್ ಆಲಕ್ಕೋಡ್,ಪಾಪಚ್ಚನ್ ತೇರ್ಪಳ್ಳಿ,ಜೋನ್ ಕೋಟ್ಟಯಂ,ಅನ್ನಕುಟ್ಟಿ ತೇರ್ಪಳ್ಳಿ,ಏಲಿಕುಟ್ಟಿ,ಮರಿಯಮ್ಮ,ಕುಟ್ಟಿಯಚ್ಚನ್ ಮೊದಲಾದವರನ್ನು ಅಗಲಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English