ಕಾಸರಗೋಡು: ಬಿಜೆಪಿ ಜಿಲ್ಲಾ ಸಮಿತಿಯನ್ನು ಪುನರ್ ರಚಿಸಲಾಗಿದ್ದು,ಕಾಸರಗೋಡು ಜಿಲ್ಲಾಧ್ಯಕ್ಷರಾಗಿ ಜಿಲ್ಲಾ ಪಂಚಾಯತ್ ಸದಸ್ಯ,ಯುವ ನಾಯಕ ನ್ಯಾಯವಾದಿ ಶ್ರೀಕಾಂತ್ ರನ್ನು ನೇಮಿಸಲಾಗಿದೆ. ರಾಜ್ಯ ಸಮಿತಿ ಸದಸ್ಯರಾಗಿದ್ದ ನಗರಸಭಾ ಕೌನ್ಸಿಲರ್ ಪಿ.ರಮೇಶ್ ಹಾಗೂ ಆರ್ಎಸ್ಎಸ್ ಕಣ್ಣೂರು ವಿಭಾಗ ಕಾರ್ಯಕಾರಿ ಸಮಿತಿ ಸದಸ್ಯ ಎ.ವೇಲಾಯುಧನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ನಿಯುಕ್ತರಾಗಿದ್ದಾರೆ.
ಈ ವೇಳೆ ಬಿಜೆಪಿ ರಾಜ್ಯ ಸಮಿತಿಯನ್ನೂ ಪುನರ್ ಸಂಘಟಿಸಲಾಗಿದ್ದು, ನಾಲ್ವರು ಪ್ರಧಾನ ಕಾರ್ಯದರ್ಶಿಗಳು, ಒಂಭತ್ತು ಉಪಾಧ್ಯಕ್ಷರುಗಳು ಮತ್ತು 42 ಮಂದಿ ಪದಾಧಿಕಾರಿಗಳನ್ನು ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖರನ್ ಘೋಷಿಸಿದ್ದಾರೆ.
ಕೆ.ಸುರೇಂದ್ರನ್,ಎಎನ್ ರಾಧಾಕೃಷ್ಣನ್,ಎಂ.ಟಿ.ರಮೇಶ್,ಶೋಭಾ ಸುರೇಂದ್ರನ್ ನೂತನ ಪ್ರಧಾನ ಕಾರ್ಯದರ್ಶಿಗಳಾಗಿದ್ದಾರೆ.ಕೆ.ಪಿ.ಶ್ರೀಶನ್ ಮಾಸ್ತರ್,ಪಿ.ಎಂ.ವೇಲಾಯುಧನ್,ಜೋರ್ಜ್ ಕುರ್ಯನ್,ಡಾ.ಪಿ.ಪಿ.ವಾವ,ಎನ್ ಶಿವರಾಜನ್,ಎಂ.ಎಸ್ ಸಂಪೂರ್ಣ,ಪ್ರಮೀಳಾ ಸಿ.ನಾಯಕ್,ನಿರ್ಮಲ ಕುಂಞಿಕೃಷ್ಣನ್,ಬಿ.ರಾಧಾಮಣಿ ಉಪಾಧ್ಯಕ್ಷರಾಗಿದ್ದಾರೆ.ಕಾರ್ಯದರ್ಶಿಗಳಾಗಿ ವಿವಿ ರಾಜೇಶ್,ಸಿ.ಶಿವನ್ ಕುಟ್ಟಿ,ವಿ.ಕೆ. ಸಜೀವನ್,ಎ.ಕೆ ನಸೀರ್,ನ್ಯಾಯವಾದಿ ಬಿ.ಗೋಪಾಲಕೃಷ್ಣ.ಸಿ.ಕೃಷ್ಣ ಕುಮಾರ್,ಎಸ್ ಗಿರಿಜಾ ಕುಮಾರಿ,ರಾಜಿ ಪ್ರಸಾದ್ ಆಯ್ಕೆಯಾಗಿದ್ದು,ಕೋಶಾಧಿಕಾರಿಯಾಗಿ ಜೆ.ಆರ್ ಪದ್ಮಕುಮಾರ್ ಆಯ್ಕೆಯಾಗಿರುವರು.ಈ ಹಿಂದಿನ ಕಾಸರಗೋಡು ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಸಹಿತ 18 ಮಂದಿ ರಾಜ್ಯ ಸಮಿತಿ ಸದಸ್ಯರಾಗಿದ್ದಾರೆ.
Click this button or press Ctrl+G to toggle between Kannada and English