ಸಮಸ್ಯೆಗೆ ಸ್ಪಂದಿಸುವ ಬಿ.ಜೆ.ಪಿಯ ಅಭ್ಯರ್ಥಿ ಕೆ.ರವೀಂದ್ರ ಕಂಬಳಿ

6:15 PM, Wednesday, February 17th, 2016
Share
1 Star2 Stars3 Stars4 Stars5 Stars
(5 rating, 7 votes)
Loading...
K Raveendra-Kambali

ಬಂಟ್ವಾಳ : 1986 ರಿಂದ 1991 ರ ಅವಧಿಯಲ್ಲಿ ಕೊಡ್ಮಾಣು ಮೇರಮಜಲು ಪುದು ಗ್ರಾಮಗಳನ್ನೊಳಗೊಂಡ ಪುದು ಮಂಡಲ ಪಮಚಾಯತ್ ಪ್ರಧಾನರಾಗಿ ಸೇವೆ ಮಾಡಿದ ಅನುಭವ ಹೊಂದಿರುವ ಶ್ರೀ.ಕೆ.ರವೀಂದ್ರ ಕಂಬಳಿ ಇವರು 13 ನೇ ಪುದು ಜಿಲ್ಲಾ ಪಂಚಾಯತ್ ಕ್ಷೇತ್ರದ ಬಿ.ಜೆ.ಪಿ ಯ ಅಭ್ಯರ್ಥಿಯಾಗಿ ಸ್ಪರ್ಧೆಯಲ್ಲಿದ್ದಾರೆ.

ಸಹಕಾರಿ ಕ್ಷೇತ್ರದಲ್ಲಿ ವ್ಯವಸಾಯ ಸೇವಾ ಸಹಕಾರಿ ಸಂಘ ಫರಂಗಿಪೇಟೆ ಇದರ ನಿರ್ದೇಶಕರಾಗಿ ಬಂಟ್ವಾಳ, ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ ಇದರ ನಿರ್ದೇಶಕರಾಗಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ ಪ್ರಸ್ತುತ್ತ ದಕ್ಷಿಣ ಕನ್ನಡ ಉಡುಪಿ ಕೊಡಗು ಜಿಲ್ಲೆಗಳನ್ನೊಳಗೊಂಡ ದ.ಕ ಕೃಷಿ ಅಭಿವೃದ್ಧಿ ಸಹಕಾರಿ ಸಂಘ SKADS ನಿರ್ದೇಶಕರಾಗಿ ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಂಘಟನಾತ್ಮಕವಾಗಿ ಬಿ.ಜೆ.ಪಿ ಪುದು ಸ್ಥಾನೀಯ ಸಮಿತಿ ಅಧ್ಯಕ್ಷನಾಗಿ ವಿಟ್ಲ ವಿಧಾನ ಸಭಾ ಕ್ಷೇತ್ರ ಸಮಿತಿಯ ಉಪಾಧ್ಯಕ್ಷರಾಗಿ ಸೇವಾಂಜಲಿ ಪ್ರೆತಿಷ್ಟಾನ ಫರಂಗಿಪೇಟೆ ಇದರ ಕೋಶಾಧಿಕಾರಿಯಾಗಿ ಧಾರ್ಮಿಕ ಕ್ಷೇತ್ರದಲ್ಲಿ 2004 ರಲ್ಲಿ ಅರಸು ವೈದ್ಯನಾಥ ಸುಜೀರು ಇದರ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಸಮರ್ಥವಾಗಿ ಸೇವೆ ಸಲ್ಲಿಸಿದ್ದಾರೆ.

ಪರಿಸರದ ಬಡ ಜನರ ದೀನ ದಲಿತರ ಕಷ್ಟ ಸುಖಗಳಿಗೆ ಸಕ್ರೀಯವಾಗಿ ಸ್ಪಂದಿಸುತ್ತಾ ಪುದು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ಸಮಸ್ಯೆ ಬಂದಲ್ಲಿ ಅದನ್ನು ಸಮರ್ಥವಾಗಿ ಪರಿಹರಿಸುತ್ತಾ ಜನಾರುರಾಗಿ ನಾಯಕನಾಗಿ ಜನರ ಪ್ರೀತಿಯನ್ನು ಗಳಿಸಿರುತ್ತಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English