ಕಾಸರಗೋಡು: ಕಾಸರಗೋಡು ವಲಯ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಸುಬ್ಬಣ್ಣ ಆಳ್ವ ಕುಚ್ಚಿಕ್ಕಾಡು ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ರಮೇಶ್ ಶೆಟ್ಟಿ ಕಾಳ್ಯಂಗಾಡು, ಕೋಶಾಧಿಕಾರಿಯಾಗಿ ಎಸ್.ಎನ್.ರಾಮ ಶೆಟ್ಟಿ ಮಾಸ್ತರ್ ಅವರನ್ನು ಆರಿಸಲಾಗಿದೆ. ವಲಯ ಸಂಘದ ಅಧ್ಯಕ್ಷರಾಗಿದ್ದ ನ್ಯಾಯವಾದಿ ಸದಾನಂದ ರೈ ಅವರು ಜಿಲ್ಲಾ ಸಂಘದ ಅಧ್ಯಕ್ಷರಾಗಿ ಆಯ್ಕೆಗೊಂಡ ಹಿನ್ನೆಲೆ ತೆರವಾದ ಕಾಸರಗೋಡು ವಲಯ ಬಂಟರ ಸಂಘದ ಅಧ್ಯಕ್ಷತೆಗೆ ಹಾಗೂ ಅದರೊಂದಿಗೆ ಇತರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸದಾನಂದ ರೈ ಅಧ್ಯಕ್ಷತೆ ವಹಿಸಿದ ಸಭೆಯಲ್ಲಿ ಜಿಲ್ಲಾ ಸಂಘದ ಪ್ರತಿನಿಧಿಗಳು, ಪಂಚಾಯತ್ ಘಟಕಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಉಪಸ್ಥಿತರಿದ್ದರು. ಉಪಾಧ್ಯಕ್ಷ ಕುಂದಿಲ ನಾರಾಯಣ ರೈ, ದೇವಾನಂದ ಶೆಟ್ಟಿ, ನೂತನ ಜತೆ ಕಾರ್ಯದರ್ಶಿಗಳಾದ ರವೀಂದ್ರ ರೈ ಮಲ್ಲಾವರ, ಕಿರಣ್ ಮಾಡ ಆದೂರು, ಶ್ಯಾಮಲಾ ಎಂ.ಶೆಟ್ಟಿ, ವಿಮಲಾ ಆರ್ ರೈ ಕೊಡವಂಜಿ, ಪ್ರಕಾಶ್ ರೈ ನೆಕ್ರಾಜೆ ಮೊದಲಾದವರು ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿದರು. ಕಾಸರಗೋಡು ನಗರದಲ್ಲಿರುವ ಬಂಟರ ಸಂಘದ ಕಾರ್ಯಾಲಯದಲ್ಲಿ ಸಭೆಯು ಜರಗಿತು.
Click this button or press Ctrl+G to toggle between Kannada and English