ಎಡನೀರಿನಲ್ಲಿ ಘರ್ಷಣೆ : ನಾಲ್ವರು ಬಿಜೆಪಿ ಕಾರ್ಯಕರ್ತರು ಆಸ್ಪತ್ರೆಗೆ

9:41 PM, Tuesday, March 8th, 2016
Share
1 Star2 Stars3 Stars4 Stars5 Stars
(5 rating, 6 votes)
Loading...
BJP Clash

ಕಾಸರಗೋಡು: ಎಡನೀರು ಪೇಟೆಯಲ್ಲಿ ಮಾ.7 ರಂದು ಸಂಜೆ ಘರ್ಷಣೆ ನಡೆದಿದ್ದು, ಬಿಜೆಪಿ ಕಾರ್ಯಕರ್ತರಾದ ಎಡನೀರು ಕೆಮ್ಮಂಗಯದ ಪುರುಷೋತ್ತಮ ಅವರ ಪುತ್ರ ಪ್ರೇಮನಾಥ್(31), ಸಹೋದರ ದೀಪಕ್(28), ಸ್ನೇಹಿತರಾದ ಪುಷ್ಪ ಕುಮಾರ್(36) ಮತ್ತು ಶಿವಪ್ರಸಾದ್(28) ಅವರು ಗಾಯಗೊಂಡಿದ್ದಾರೆ. ಈ ಪೈಕಿ ಶಿವಪ್ರಸಾದ್ ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಮೂವರನ್ನು ಜನರಲ್ ಆಸ್ಪತ್ರೆಗೆ ಸೇರಿಸಲಾಗಿದೆ.

ಎಡನೀರು ಪೇಟೆಯಲ್ಲಿ 15 ಮಂದಿ ಸಿಪಿಎಂ ಕಾರ್ಯಕರ್ತರು ಮಾರಕಾಯುಧಗಳಿಂದ ಹಲ್ಲೆ ಮಾಡಿದ್ದಾಗಿ ಗಾಯಾಳುಗಳು ಆರೋಪಿಸಿದ್ದಾರೆ. ಭಾನುವಾರ ಸಂಜೆ ಪ್ರೇಮನಾಥ್ ಗೆ ತಂಡವೊಂದು ಆಕ್ರಮಿಸಿತ್ತು.ಈ ಬಗ್ಗೆ ಪ್ರಶ್ನಿಸಿದಾಗ ತಂಡ ಮತ್ತೆ ಆಕ್ರಮಣ ನಡೆಸಿತೆಂದು ಗಾಯಾಳುಗಳು ತಿಳಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English