ಮಂಜೇಶ್ವರ: ದುಬೈ ನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತು ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿಯವರನ್ನು ಸಮ್ಮಾನಿಸಲಾಯಿತು.
ಮಲಬಾರ್ ಕಲಾ ಸಾಂಸ್ಕ್ರತಿಕ ಕಲಾ ವೇದಿಕೆ ಹಾಗೂ ದುಬೈ ಕನ್ನಡಿಗರ ಜಂಟಿ ಆಶ್ರಯದಲ್ಲಿ ದುಬ ಇಂಡಿಯನ್ ಸ್ಕೂಲ್ ಆಡಿಟೋರಿಯಂನಲ್ಲಿ ಜರುಗಿದ ಸಮಾರಂಭದಲ್ಲಿ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹಾಗೂ ಅನಿವಾಸಿ ಉದ್ಯಮಿ ಪದ್ಮಶ್ರಿ ಡಾ.ಬಿ.ಆರ್.ಶೆಟ್ಟಿ ಹರ್ಷಾದ್ ವರ್ಕಾಡಿಯವರನ್ನು ಶಾಲು ಹೊದೆಸಿ ಸ್ಮರಣಿಕೆ ನೀಡಿ ಸಮ್ಮಾನಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸಚಿವರುಗಳಾದ ಬಿ.ರಮಾನಾಥ ರೈ, ಯು.ಟಿ.ಖಾದರ್, ಯುಎಇ ಎಕ್ಸ್ಚೇಂಜ್ ಅಧ್ಯಕ್ಷ ಸುಧೀರ ಕುಮಾರ್ ಶೆಟ್ಟಿ, ಯುಎಇ ಕನ್ನಡಿಗರ ಒಕ್ಕೂಟದ ಸರ್ವೋತ್ತಮ ಶೆಟ್ಟಿ, ದುಬ-ಮಲಬಾರ್ ಕಲಾ ಸಾಂಸ್ಕ್ರತಿಕ ವೇದಿಕೆಯ ಅಧ್ಯಕ್ಷ ಯೂಸುಫ್ ಅಲ್ ಫಲಾಹ್ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಜತೆ ಸಂವಾದ ಕಾರ್ಯಕ್ರಮ ಜರುಗಿತು.
Click this button or press Ctrl+G to toggle between Kannada and English