ಉಪ್ಪಳ: ಹತ್ತು ವರ್ಷಗಳ ಹಿಂದೆ ನಡೆದ ವಾಹನ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಬಾಲಕ ಮೃತಪಟ್ಟ ಘಟನೆ ನಡೆದಿದೆ.
ಜನತಾದಳ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ,ಮಂಗಲ್ಪಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಟಿಂಬರ್ ಅಬ್ದುಲ್ಲ&ಆಯಿಷಾ ದಂಪತಿಗಳ ಪುತ್ರ ಉಪ್ಪಳ ಮಣ್ಣಂಗುಳಿ ಸುಹನಾ ಮಂಝಿಲ್ ನಿವಾಸಿ ಮುಹಮ್ಮದ್ ಫಯಾಸ್(12)ಮೃತ ಬಾಲಕನಾಗಿದ್ದಾನೆ.
ಹತ್ತು ವರ್ಷಗಳ ಹಿಂದೆ ಮಣ್ಣಂಗುಳಿಯಲ್ಲಿ ಮನೆ ಬಳಿ ರಸ್ತೆ ಬದಿ ಆಟವಾಡುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಚಿಕಿತ್ಸೆಯಲ್ಲಿದ್ದನು.ಆದರೆ ಕಳೆದ ಎರಡು ವಾರಗಳ ಹಿಂದೆ ಬಾಲಕನಿಗೆ ನ್ಯುಮೋನಿಯಾ ಬಾಧಿಸಿದ್ದರಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಚಿಕಿತ್ಸೆಯ ಮಧ್ಯೆ ಭಾನುವಾರ ರಾತ್ರಿ ಮೃತಪಟ್ಟನು.ಮೃತನು ತಂದೆ,ತಾಯಿ,ಆರು ಮಂದಿ ಸೋದರರು,ಇಬ್ಬರು ಸಹೋದರಿಯರನ್ನು ಅಗಲಿದ್ದಾನೆ.
Click this button or press Ctrl+G to toggle between Kannada and English