ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಸ್ವಿಫ್ಟ್ ಕಾರು: ಕಾರಲ್ಲಿದ್ದವರು ಪರಾರಿ

4:30 PM, Friday, August 12th, 2016
Share
1 Star2 Stars3 Stars4 Stars5 Stars
(No Ratings Yet)
Loading...

Cattleಮಂಗಳೂರು: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಸ್ವಿಫ್ಟ್ ಕಾರಿನಲ್ಲಿ ದನ ಕಟ್ಟುವ ಹಗ್ಗ, ಸಗಣಿ, ಚೂರಿ ಪತ್ತೆಯಾದ ಘಟನೆ ಕೃಷ್ಣಾಪುರ ಸಮೀಪದ ನೈತಂಗಡಿ ಯುವಕ ಮಂಡಲದ ಬಳಿ ನಡೆದಿದ್ದು ಸ್ಥಳೀಯರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಅಪಘಾತ ನಡೆದ ತಕ್ಷಣ ಕಾರಿನಲ್ಲಿ ಮೂವರು ಕಾರನ್ನು ಬಿಟ್ಟು ಪರಾರಿಯಾಗಿದ್ದರಾದರೂ ಈ ಮೂವರ ಫೊಟೋವನ್ನು ಸ್ಥಳೀಯರು ತೆಗೆದಿದ್ದು ಅದನ್ನು ಪೊಲೀಸರಿಗೆ ನೀಡಿದ್ದಾರೆ.

ಅಪಘಾತ ನಡೆದ ಕೂಡಲೇ ಕಾರಲ್ಲಿದ್ದವರು ಪರಾರಿಯಾದ ಕಾರಣ ಶಂಕೆಗೊಂಡ ಸ್ಥಳೀಯರು ಕಾರು ಪರಿಶೀಲಿಸಿದಾಗ ಅದರಲ್ಲಿ ದನ ಕಟ್ಟುವ ಹಗ್ಗ, ಸಗಣಿ, ಚೂರಿ ಪತ್ತೆಯಾಗಿದೆ.

ಕಾರು ಉಡುಪಿ ನೋಂದಣಿಯನ್ನು ಹೊಂದಿದ್ದು ಸುರತ್ಕಲ್ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಇದೊಂದು ಗೋ ಹತ್ಯೆ, ಕಳ್ಳತನ ನಡೆಸುವವರ ತಂಡಕ್ಕೆ ಸೇರಿದ ಕಾರು ಆಗಿರಬಹುದೇ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English