ಮಂಗಳೂರು: ನಗರದ ಕರಂಗಲ್ಪಾಡಿಯಲ್ಲಿಧಿರುವ ನಯನ ನೇತ್ರಾಲಯದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ನೇತ್ರದಾನ ಮಾಡುವ ಸಂಕಲ್ಪ ಪತ್ರಕ್ಕೆ ಸಹಿ ಹಾಕುವ ಮೂಲಕ ಸಾಮಾಜಿಕ ಬದ್ಧತೆ ಮೆರೆದಿದ್ದಾರೆ.
ಕಾರ್ನಿಯಾ ಅಂಧತ್ವ ಮುಕ್ತ ಭಾರತ (ಕಾಂಬಾ) ಅಭಿಧಿಯಾನದ ಅಂಗವಾಗಿ ದ.ಕ. ಜಿಲ್ಲಾ ಬಿಜೆಪಿ ಆರೋಗ್ಯ ಪ್ರಕೋಷ್ಠ, ಸಮದೃಷಿÒ ಕ್ಷಮತಾ ವಿಕಾಸ ಮತ್ತು ಅನುಧಿಸಂಧಾನ ಮಂಡಲದ (ಸಕ್ಷಮ) ಸಹಯೋಗಧಿದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಅವರು ನೇತ್ರದಾನ ಸಂಕಲ್ಪ ಪತ್ರಕ್ಕೆ ಸಹಿ ಹಾಕಿದರು. ನಯನ ನೇತ್ರಾಲಯದ ನೇತ್ರತಜ್ಞ ಡಾ| ವಿಷ್ಣು ಪ್ರಭು ಸಂಕಲ್ಪ ಪತ್ರ ವಿತರಿಸಿದರು.
ನಳಿನ್ ಕುಮಾರ್ ಮಾತನಾಡಿ, ಅಂಗಾಂಗ ದಾನಕ್ಕೆ ಜನತೆ ಸ್ವಯಂಪ್ರೇರಿತರಾಗಿ ಮುಂದಾಗಬೇಕು. ನೇತ್ರಧಿದಾನ ಮಾಡುವ ಮೂಲಕ ಇನ್ನೊಬ್ಬರ ಬಾಳಿಗೆ ಬೆಳಕು ನೀಡುವ ಕಾರ್ಯ ಆಗಬೇಕು. “ನಾನು ನಿನಗಾಗಿ ಬದುಕಧಿಬೇಕು’ ಎಂಬ ಕಲ್ಪನೆ ಪ್ರತಿಯೊಬ್ಬರಲ್ಲಿ ಬರಬೇಕು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಮೋನಪ್ಪ ಭಂಡಾರಿ, ಬಿಜೆಪಿ ಉತ್ತರ ಮಂಡಲ ಅಧ್ಯಕ್ಷ ಡಾ| ವೈ. ಭರತ್ ಶೆಟ್ಟಿ, ದಕ್ಷಿಣ ಮಂಡಲ ಅಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್ ಸೇರಿದಂತೆ ಸುಮಾರು 15 ಮಂದಿ ಇದೇ ವೇಳೆ ನೇತ್ರದಾನದ ಸಂಕಲ್ಪ ಮಾಡಿದರು.
ಬಿಜೆಪಿ ಮುಖಂಡ ಜಿತೇಂದ್ರ ಕೊಟ್ಟಾರಿ, ಡಾ| ಮುರಳೀ ಕೇಶವ, ಸಕ್ಷಮದ ಡಾ| ಕೇಶವ ನಂದೋಡಿ, ಪಿ. ವಿನೋದ್ ಶೆಣೈ, ಡಾ| ಬಾಳಿಗಾ, ನಿತೇಶ್ ಎಂ. ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.
ದ.ಕ. ಜಿಲ್ಲಾ ಬಿಜೆಪಿ ಆರೋಗ್ಯ ಪ್ರಕೋಷ್ಠದ ಅಧ್ಯಕ್ಷ ಡಾ| ಅಣ್ಣಯ್ಯ ಕುಲಾಲ್ ಸ್ವಾಗತಿಸಿದರು.
Click this button or press Ctrl+G to toggle between Kannada and English