ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿ ಶ್ರೀ ದೇವಿಯ ದರ್ಶನ ಪಡೆದ ರವಿಶಂಕರ್‌ ಗುರೂಜೀ

11:39 AM, Wednesday, August 31st, 2016
Share
1 Star2 Stars3 Stars4 Stars5 Stars
(No Ratings Yet)
Loading...

Shree-Ravi-Shankar-Gurujiಕೊಲ್ಲೂರು: ಆರ್ಟ್ಸ್ ಆಫ್‌ ಲಿವಿಂಗ್‌ನ ಸಂಸ್ಥಾಪಕ ಶ್ರೀ ರವಿಶಂಕರ್‌ ಗುರೂಜೀ ಆ. 30ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿ ಶ್ರೀ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ದೇಗುಲದ ಒಳಪೌಳಿಯಲ್ಲಿರುವ ಶ್ರೀ ಶಂಕರಾಚಾರ್ಯ ಪೀಠದಲ್ಲಿ ಅರ್ಧ ತಾಸು ಧ್ಯಾನಾಸಕ್ತರಾದರು.

ಶ್ರೀ ದೇವಿಯ ದರ್ಶನ ಪಡೆದ ರವಿಶಂಕರ್‌ ಗುರೂಜೀ ಶಂಕರಾಚಾರ್ಯರ ಪೀಠದತ್ತ ಸಾಗಿ ಪದ್ಮಾಸನದಲ್ಲಿ ಕುಳಿತು ಧ್ಯಾನ ಮಾಡಿದ ಕ್ಷಣ ಸಹಸ್ರಾರು ಭಕ್ತರನ್ನು ಪುಳಕಿತಗೊಳಿಸಿತು.

ಅರ್ಧ ಗಂಟೆ ಧ್ಯಾನದ ಬಳಿಕ ಗುರೂಜೀ ಮಾತನಾಡಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿ ಆರಾಧನೆಯಿಂದ ಭಕ್ತರ ಬದುಕಿಗೆ ಹೊಸ ಆಯಾಮ ದೊರಕುತ್ತದೆ. ಸಿದ್ಧಿ, ಧ್ಯಾನ ಕೇಂದ್ರವಾದ ಈ ಸಾನ್ನಿಧ್ಯ ವಿಶೇಷ ಶಕ್ತಿ ಹೊಂದಿದೆ. ಲೋಕಕಲ್ಯಾಣಾರ್ಥ ಶ್ರೀ ದೇವಿಯಲ್ಲಿ ಪ್ರಾರ್ಥಿಸಿರುವುದಾಗಿ ಹೇಳಿದರು.

ದೇಗುಲದ ಉಪ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ ಅವರು ಗುರೂಜೀ ಅವರನ್ನು ಸ್ವಾಗತಿಸಿ, ಗೌರವಿಸಿದರು. ನೂರಾರು ಸಂಖ್ಯೆಯ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಗುರೂಜಿ ಅವರೊಡನೆ ಕಮಲಶಿಲೆ ದೇಗುಲಕ್ಕೆ ತೆರಳಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English