ಬೆಂಗಳೂರಿಗೆ ಹೋಗಿದ್ದ ಯುವತಿಯೋರ್ವಳು ಮಗುವಿನ ಸಮೇತ ಪತ್ತೆ

4:29 PM, Thursday, October 20th, 2016
Share
1 Star2 Stars3 Stars4 Stars5 Stars
(No Ratings Yet)
Loading...

Missing-mangaluru-ladyಮಂಗಳೂರು: ಕೆಲಸ ಸಿಕ್ಕಿದೆ ಎಂದು ಬೆಂಗಳೂರಿಗೆ ಹೋಗಿದ್ದ ಯುವತಿಯೋರ್ವಳು ಬಳಿಕ ಮಗುವಿನ ಸಮೇತ ಪತ್ತೆಯಾಗಿರುವ ಪ್ರಸಂಗ ನಗರದ ಜನತೆಯಲ್ಲಿ ಆಶ್ಚರ್ಯ ಮೂಡಿಸಿದೆ.

ನಗರದ ಬೆಸೆಂಟ್‌ ಕಾಲೇಜಿನಲ್ಲಿ ಬಿಎಸ್‌ಸಿ ವ್ಯಾಸಂಗ ಮಾಡುತ್ತಿದ್ದ ಬೊಕ್ಕಪಟ್ನ ನಿವಾಸಿ ಐಶ್ವರ್ಯ ಶೆಟ್ಟಿ ಮೂರು ತಿಂಗಳ ಹಿಂದೆ ಉದ್ಯೋಗ ದೊರೆತಿರುವುದಾಗಿ ಹೇಳಿ ಬೆಂಗಳೂರಿಗೆ ತೆರಳಿದ್ದಳು. ಬೆಂಗಳೂರಿಗೆ ತೆರಳಿದ್ದ ಕೆಲ ದಿನಗಳವರೆಗೆ ತಾಯಿ ಜೊತೆ ನಿರಂತರ ಸಂಪರ್ಕದಲ್ಲಿದ್ದ ಐಶ್ವರ್ಯ ಕೆಲ ದಿನಗಳ ನಂತರ ತಾಯಿ ಜೊತೆ ಮಾತುಕತೆ ನಿಲ್ಲಿಸಲು ಪ್ರಯತ್ನಿಸಿದ್ದಳಂತೆ. ಹಬ್ಬ ಹರಿದಿನಗಳ ಸಂದರ್ಭದಲ್ಲಿ ಊರಿಗೆ ಬರುವಂತೆ ತಾಯಿ ಬೇಡಿಕೊಂಡರು ಐಶ್ವರ್ಯ ಊರಿಗೆ ಬರಲು ನಿರಾಕರಿಸಿದಳಂತೆ.

ಮಗಳ ನಡವಳಿಕೆ ಬಗ್ಗೆ ಸಂಶಯ ಮೂಡಿದ ಮೇಲೆ ಐಶ್ವರ್ಯಳ ತಾಯಿ ಬರ್ಕೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಳು. ದೂರು ದಾಖಲಿಸಿಕೊಂಡ ಪೊಲೀಸರು ಐಶ್ವರ್ಯಳ ಪತ್ತೆಗೆ ಬಲೆ ಬೀಸಿದ್ದರು. ಈ ವೇಳೆ ಬೆಂಗಳೂರಿನ ಲಾಡ್ಜ್‌ವೊಂದರಲ್ಲಿ ಐಶ್ವರ್ಯ ನವಜಾತ ಮಗುವಿನೊಂದಿಗೆ ಪೊಲೀಸರ ಕೈಗೆ ಸಿಕ್ಕಿದ್ದಾಳೆ.

ಪೊಲೀಸರ ಬಲೆ ಬಿದ್ದ ಮೇಲೆ ಐಶ್ವರ್ಯಳ ನಿಜವಾದ ಸ್ಟೋರಿ ಬಯಲಾಗಿದೆ. ಅಷ್ಟಕ್ಕೂ ಐಶ್ವರ್ಯ ಕೆಲಸ ಅರಸಿಕೊಂಡು ಬೆಂಗಳೂರಿಗೆ ಹೋಗಿರಲಿಲ್ಲ. ಪವನ್ ಬಂಗೇರ ಎನ್ನುವ ತನ್ನ ಪ್ರಿಯತಮನ ಜೊತೆ ಬೆಂಗಳೂರಿಗೆ ತೆರಳಿದ್ದಳು ಎಂದು ಹೇಳಲಾಗುತ್ತಿದೆ.

ಪವನ್ ಮೂಲತಃ ಕುದ್ರೋಳಿ ನಿವಾಸಿ. ಕಾಲೇಜಿನಲ್ಲಿ ಓದುತ್ತಿದ್ದ ವೇಳೆ ಪವನ್ ಹಾಗೂ ಐಶ್ವರ್ಯ ನಡುವೆ ಸ್ನೇಹವಾಗಿತ್ತು, ಬಳಿಕ ಸ್ನೇಹ ಪ್ರೀತಿಯಾಗಿ ಪ್ರಮೋಶನ್ ಪಡೆದಿತ್ತು. ಇದಾದ ಬಳಿಕ ಪವನ್ ಹಾಗೂ ಐಶ್ವರ್ಯ ಬೆಂಗಳೂರು ಸೇರಿದ್ದರು.

ಬೆಂಗಳೂರಿಗೆ ಬಂದು ನೆಲೆಸಿದ ಈ ಜೋಡಿ ಇಲ್ಲಿಯ ದೇವಸ್ಥಾನವೊಂದರಲ್ಲಿ ಮದುವೆ ಮಾಡಿಕೊಂಡಿದ್ದಾರಂತೆ. ಕಳೆದ ಒಂದು ವಾರದ ಹಿಂದೆ ಮಗುವಿಗೆ ಐಶ್ವರ್ಯ ಜನ್ಮ ನೀಡಿದ್ದಾಳೆ. ಇದೀಗ ಮಗು ಸಮೇತ ಐಶ್ವರ್ಯಳನ್ನು ಬರ್ಕೆ ಪೊಲೀಸರು ನಗರಕ್ಕೆ ಕರೆತಂದು ಪಾಲಕರಿಗೆ ಒಪ್ಪಿಸಿದ್ದಾರೆ. ಮಗಳು ಗರ್ಭಿಣಿಯಾಗಿರುವ ವಿಷಯ ಮನೆಯವರಿಗೆ ತಿಳಿಯದೆ ಇದ್ದದ್ದು ನಿಜಕ್ಕೂ ಆಶ್ಚರ್ಯ ಸಂಗತಿ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English