ಸ್ಫೋಟಕ ಇಟ್ಟು ಪ್ರಾಣಿಗಳನ್ನು ಸಾಯಿಸುತ್ತಿದ್ದ ಆರೋಪಿಗಳ ಬಂಧನ

2:26 PM, Tuesday, October 25th, 2016
Share
1 Star2 Stars3 Stars4 Stars5 Stars
(No Ratings Yet)
Loading...

challangaru-hillsಮಂಗಳೂರು: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯ ಕರೋಪ್ಪಾಡಿ ಗ್ರಾಮದ ಪಾದೆಕಲ್ಲು, ಚಿಲ್ಲಂಗಾರು ಎಂಬಲ್ಲಿ ಸ್ಫೋಟಕ ಇಟ್ಟು ಪ್ರಾಣಿಗಳನ್ನು ಸಾಯಿಸುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.

ಪ್ರಾಣಿಗಳನ್ನ ಕೊಲ್ಲುವ ಉದ್ದೇಶದಿಂದ ಸ್ಫೋಟಕ ಇಟ್ಟಿದ್ದರಿಂದ ಇತ್ತೀಚೆಗೆ ರಾಧಾಕೃಷ್ಣ ಮೂಲ್ಯ ಎಂಬುವರ ಹಸುವೊಂದು ಆ ಸ್ಫೋಟಕವನ್ನು ಕಚ್ಚಿದ್ದರಿಂದ ಅದು ಮೃತಪಟ್ಟಿತ್ತು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಸಲಾಗಿತ್ತು.

ಪ್ರಕರಣ ಸಂಬಂಧ ಸೀನಪ್ಪ ನಾಯ್ಕ (48), ವಿನೋದ (30), ವಿಜಯ ಜಾನ್ (30) ಹಾಗೂ ಗೋವಿಂದ ನಾಯ್ಕ (64) ಎಂಬುವರನ್ನು ಬಂಧಿಸಲಾಗಿದೆ.

ಆರೋಪಿಗಳನ್ನು ವಿಟ್ಲ ಠಾಣಾ ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗಳು ಹಂದಿ, ಮೀನು ಮುಂತಾದವುಗಳನ್ನು ಶಿಕಾರಿ ಮಾಡಲು ಈ ಕೃತ್ಯವನ್ನು ಎಸಗುತ್ತಿದ್ದರು ಎನ್ನಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English