ಉಡುಪಿ: ಅವರು ವೃದ್ಧೆ. ಕಾಪು ಪ್ರದೇಶದಲ್ಲಿ ಮನೆಗೆಲಸ ಮಾಡಿಕೊಂಡಿದ್ದರು. ಗಂಡನೂ ತೀರಿಹೋಗಿದ್ದರು, ಮಕ್ಕಳೂ ಇಲ್ಲ. ಶಕ್ತಿ ಇರುವಾಗಲೇ ಬಂಧುಗಳು ಮನೆಯಿಂದ ಹೊರಗೆ ಹಾಕಿದ್ದರೆಂದು ಅವರೇ ಹೇಳುತ್ತಿದ್ದರು. ಮೂರು ವರ್ಷಗಳ ಹಿಂದೆ ಮೂಡಬೆಟ್ಟಿನ ಶ್ರೀಕೃಷ್ಣ ವೃದ್ಧರ ಆಶ್ರಯಧಾಮದಲ್ಲಿ ಸೇರ್ಪಡೆಗೊಂಡರು. ಸೇರಿಸುವಾಗಲೇ “ತೀರಿಹೋದ ಬಳಿಕ ಹೇಳುತ್ತೇನೆ’ ಎಂದು ಅಣ್ಣನ ಬಳಿ ಹೇಳಿದಾಗ “ಬರುತ್ತೇನೆ’ ಎಂದಿದ್ದರು.
ವೃದ್ಧೆ ಬುಧವಾರ ನಿಧನ ಹೊಂದಿದರು. ಅಣ್ಣನಿಗೆ ದೂರವಾಣಿ ಕರೆ ನೀಡಿದಾಗ ಮತ್ತೆ ರಿಂಗಣಿಸಲೇ ಇಲ್ಲ, ದೂರವಾಣಿ ಸ್ತಬ್ಧವಾಗಿತ್ತು. ಅಕ್ಕ ಬಂದವರು ನೀವೇ ಅಂತಿಮ ಸಂಸ್ಕಾರ ಮಾಡಬೇಕೆಂದು ಆಶ್ರಯ ಧಾಮದ ಮುಖ್ಯಸ್ಥ ಕೊರಂಗ್ರಪಾಡಿ ಕೃಷ್ಣಮೂರ್ತಿ ಆಚಾರ್ಯರಿಗೆ ತಿಳಿಸಿದರು. ಬೀಡಿನಗುಡ್ಡೆಯ ರುದ್ರಭೂಮಿಯಲ್ಲಿ ಕೃಷ್ಣಮೂರ್ತಿ ಆಚಾರ್ಯರೇ ಅಂತಿಮ ಸಂಸ್ಕಾರ ನಡೆಸಿದರು.
ಹಿಂದೆ ಕಟಪಾಡಿಯಲ್ಲಿ ಈಗ ಮೂಡುಬೆಟ್ಟು ಶಾಲೆ ಬಳಿ ವೃದ್ಧಾಶ್ರಮ ನಡೆಸುತ್ತಿರುವ ಕೃಷ್ಣಮೂರ್ತಿ ಆಚಾರ್ಯರು ಈಗಿನ ಅಂತಿಮ ಸಂಸ್ಕಾರ ಸೇರಿದಂತೆ ಮೂವರು ಮಹಿಳೆಯರು, ಇಬ್ಬರು ಪುರುಷರ ಅಂತಿಮ ಸಂಸ್ಕಾರವನ್ನು ನಡೆಸಿದ್ದಾರೆ.
Click this button or press Ctrl+G to toggle between Kannada and English