ಮಂಗಳೂರು: ಉಳ್ಳಾಲದ ಮಹಿಳೆಯೋರ್ವಳಿಗೆ ವಿದೇಶಿ ಕರೆನ್ಸಿ ಗಿಫ್ಟ್ ಕಳುಹಿಸುವ ಆಮಿಷವೊಡ್ಡಿ 21 ಲಕ್ಷ ರೂ. ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ನವದೆಹಲಿಯ ಲಾಲ್ ತಾನ್ ಮಾವಿಯಾ (34) ಮತ್ತು ಮಣಿಪುರದ ಕೂಫ್ ಬೊಯಿ (32) ಬಂಧಿತರು. ಆರೋಪಿಗಳಿಬ್ಬರು ವಾಯ್ಲೆಟ್ ಡಿಸೋಜ ಎಂಬುವರಿಗೆ ರಾಯಲ್ ಬ್ಯಾಂಕ್ ಸ್ಕಾಟ್ಲ್ಯಾಂಡ್ ನವದೆಹಲಿಯ ಹೆಸರಿನಲ್ಲಿ ವಿದೇಶಿ ಕರೆನ್ಸಿ ಗಿಫ್ಟ್ ನೀಡಲಾಗುವುದೆಂದು ಮೊದಲು ಈಮೇಲ್ ಸಂದೇಶ ಕಳುಹಿಸಿದ್ದರು. ಆಗ ಮಹಿಳೆಯಿಂದ 21,58,200 ರೂ. ಗಳನ್ನು ತಮ್ಮ ಖಾತೆಗೆ ಜಮಾ ಮಾಡಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ.
ವಿದೇಶಿ ಕರೆನ್ಸಿ ಗಿಫ್ಟ್ ಬರದಿದ್ದಾಗ ತಾನು ಮೋಸ ಹೋಗಿರುವುದು ಮಹಿಳೆ ಅರಿವೆಗೆ ಬಂದಿದೆ. ಆಗ ವಂಚನೆಯ ಬಗ್ಗೆ ಮಹಿಳೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಉಳ್ಳಾಲ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
Click this button or press Ctrl+G to toggle between Kannada and English