50 ಸಾವಿರ ರೂ. ಸಾಲಮನ್ನಾದ ಹಣೆಬರಹ ಇನ್ನೊಂದು ತಿಂಗಳಲ್ಲಿ ಗೊತ್ತಾಗುತ್ತದೆ : ಕುಮಾರಸ್ವಾಮಿ

10:59 PM, Monday, June 26th, 2017
Share
1 Star2 Stars3 Stars4 Stars5 Stars
(No Ratings Yet)
Loading...

Udupi Kumara swamyಉಡುಪಿ : ಬಾಬು ಜಗಜೀವನ್‌ರಾಂ ಮಗಳು  ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್ ಅವರಿಗೆ ಜಾತ್ಯತೀತ ಜನತಾದಳ ವಿಪಕ್ಷಗಳ ಬೆಂಬಲ ನೀಡಲು ನಿರ್ಧರಿಸಿದೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ತನಗೆ ಹಾಗೂ ತಂದೆ ಎಚ್.ಡಿ.ದೇವೇಗೌಡರಿಗೆ ದೂರವಾಣಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ಅವರು ಬೆಳಗ್ಗೆ ಕರೆ ಮಾಡಿ ಮಾತನಾಡಿ ಮೀರಾ ಕುಮಾರ್‌ಗೆ ಬೆಂಬಲವನ್ನು ಯಾಚಿಸಿದ್ದು, 17 ಪಕ್ಷಗಳ ಅಭ್ಯರ್ಥಿ ಯಾಗಿರುವ ಅವರಿಗೆ ಪಕ್ಷದ ಬೆಂಬಲ ನೀಡಲು ನಿರ್ಧರಿಸಿದ್ದೇವೆ ಎಂದರು.

ರಾಜಕಾರಣಕ್ಕೆ ಬರುವವರೆಗೆ (1997) ನಾನೂ ರೈತನಾಗಿ ಕೃಷಿ ಮಾಡಿದ್ದೆ. ಶಾಲಾ ಕಾಲೇಜು ರಜಾ ದಿನಗಳಲ್ಲಿ ನಾನು ತಿಪ್ಪೆಯಿಂದ ಗೊಬ್ಬರ ಎತ್ತಿದ್ದೇನೆ, ಗಾಡಿ ಓಡಿಸಿದ್ದೇನೆ, ಸಿದ್ದರಾಮಯ್ಯ ರಾಜ್ಯದ ರೈತರಿಗೆ ಕೊಟ್ಟ ಬಳವಳಿ ಏನು ಎಂಬ ಇತಿಹಾಸ ವನ್ನು ಅವರ ಕಾಲದಲ್ಲಿ ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ಹೇಳುತ್ತದೆ. ಇನ್ನು ಅವರು ಮಾಡಿದ 50 ಸಾವಿರ ರೂ. ಸಾಲಮನ್ನಾದ ಹಣೆಬರಹ ಇನ್ನೊಂದು ತಿಂಗಳಲ್ಲಿ ಗೊತ್ತಾಗುತ್ತದೆ. ಆಗ ನಾನು ಹೇಳುತ್ತೇನೆ ಎಂದು ಕುಮಾರಸ್ವಾಮಿ ನುಡಿದರು.

ಪೇಜಾವರ ಶ್ರೀಗಳು ಖುದ್ದಾಗಿ ನೀಡಿದ ಆಹ್ವಾನವನ್ನು ತಿರಸ್ಕರಿಸಿ ಸಿದ್ದರಾಮಯ್ಯಉಡುಪಿಗೆ ಬಾರದಿರುವುದನ್ನು ಉದ್ದಟತನವೆಂದು ಬಣ್ಣಿಸಿದರು. ಇದರಿಂದ ಮಠಕ್ಕಾಗಲೀ, ಪೇಜಾವರಶ್ರೀಗಳಿಗಾಗಲೀ ನಷ್ಟವಿಲ್ಲ. ನಷ್ಟವಿರುವುದು ಸಿದ್ದರಾಮಯ್ಯರಿಗೆ ಹಾಗೂ ಅವರ ಸರಕಾರಕ್ಕೆ ಎಂದರು.

ಈ ಬಾರಿಯೂ ರಾಜ್ಯದಲ್ಲಿ ನಿರೀಕ್ಷಿತ ಮಳೆ ಬಾರದಿರಲು ಸಿದ್ದರಾಮಯ್ಯರ ದ್ವೇಷ, ಸಣ್ಣತನ, ಕೀಳುಮಟ್ಟದ ಅಭಿರುಚಿಯ ವ್ಯಕ್ತಿ ಮುಖ್ಯಮಂತ್ರಿಯಾಗಿರುವುದೇ ಕಾರಣ. ಇದರಿಂದ ರಾಜ್ಯದ ಜನತೆ ಇದಕ್ಕಿಂತ ಉತ್ತಮ ಬದುಕು ಕಾಣಲು ಸಾಧ್ಯವಿಲ್ಲ ಎಂಬುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇರೆ ಇಲ್ಲ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಅವರು ಪತ್ನಿ, ಚಿತ್ರ ನಟ ಪುತ್ರ ನಿಕಿಲ್‌ರೊಂದಿಗೆ ರವಿವಾರ ಸಂಜೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English