ಮಂಗಳೂರು: ಬೆಂಜನಪದವು ಎಂಬಲ್ಲಿ ಎಸ್ಡಿಪಿಐ ಮುಖಂಡ ಅಶ್ರಫ್ ಕಲಾಯಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಎನ್ನಲಾದ ಭರತ್ ಕುಮ್ಡೇಲ್ನನ್ನು ಪೊಲೀಸರು ಬಂಧಿಸಿದ್ದಾರೆ.
ಭಜರಂಗದಳ ಪುತ್ತೂರು ವಿಭಾಗದ ಸಹಸಂಚಾಲಕ ಭರತ್ ಕುಮ್ಡೇಲ್ ಕಲಾಯಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಎನ್ನಲಾಗಿದ್ದು ಇದುವರೆಗೆ ಬಂಧನ ವಾಗಿರಲಿಲ್ಲ.
ಈ ಪ್ರಕರಣದಲ್ಲಿ ಒಟ್ಟು ಆರು ಜನ ಆರೋಪಿಗಳನ್ನು ಬಂಧನವಾಗಿತ್ತು. ಇದೀಗ ತಲೆಮರೆಸಿಕೊಂಡಿದ್ದ ಆರೋಪಿ ಭರತ್ ಕುಮ್ಡೇಲ್ನ ಬಂಧನವಾಗಿದೆ.
ಜೂನ್ 21ರಂದು ದ.ಕ ಜಿಲ್ಲೆಯ ಬೆಂಜನಪದವುನಲ್ಲಿ ಅಶ್ರಫ್ ಕೊಲೆ ನಡೆದಿತ್ತು.
Click this button or press Ctrl+G to toggle between Kannada and English