ಕುತ್ತಾರಿನ ರಾಣಿಪುರದಲ್ಲಿ ಪಲ್ಸರ್ ಬೈಕಿನಲ್ಲಿ ಬಂದು ಯುವಕನ ಮೇಲೆ ತಲವಾರಿನಿಂದ ದಾಳಿ

11:41 PM, Saturday, July 8th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Chiranjivi

ಮಂಗಳೂರು : ದಕ್ಷಿಣ ಕನ್ನಡದಲ್ಲಿ ದುಷ್ಕರ್ಮಿಗಳ ಅಟ್ಟಹಾಸ ಮುಂದುವರೆದಿದ್ದು ಯುವಕನ ಮೇಲೆ ಮೂವರು ಅಪರಿಚಿತರು ತಲವಾರಿನಿಂದ ದಾಳಿ ಮಾಡಿರುವ ಘಟನೆ ಕುತ್ತಾರಿನ ರಾಣಿಪುರದಲ್ಲಿ ಶನಿವಾರ ಸಂಜೆ ಸಂಭವಿಸಿದೆ.

ಅಂಬ್ಲಮೊಗರು ಕೊಟ್ರಾಗುತ್ತು ನಿವಾಸಿ ಚಿರಂಜೀವಿ (24)ದುಷ್ಕರ್ಮಿಗಳಿಂದ ದಾಳಿಗೊಳಗಾದ ಯುವಕನೆಂದು ತಿಳಿದುಬಂದಿದೆ, ಬೈಕಿನಲ್ಲಿ ತೆರಳುತ್ತಿದ್ದ ಸಂದರ್ಭ ಮೂವರು ಅಪರಿಚಿತರು ಕಪ್ಪು ಬಣ್ಣದ ಪಲ್ಸರ್ ಬೈಕಿನಲ್ಲಿ ಬಂದು ತಲವಾರಿನಿಂದ ದಾಳಿನಡೆಸಿ ಪರಾರಿಯಾಗಿದ್ದಾರೆ.

ಚಿರಂಜೀವಿ ತಲೆಗೆ ಗಂಭೀರ ಗಾಯವಾಗಿದ್ದು ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English