ಚಲಿಸುವ ಮಾರುತಿ ವ್ಯಾನಿಗೆ ದಾರಿದೀಪ ಕಂಬ ಬಿದ್ದು ಓರ್ವನಿಗೆ ಗಾಯ

6:13 PM, Monday, October 9th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Car Accidentಮಂಗಳೂರು: ನಗರದ ರಾವ್ ಎಂಡ್ ರಾವ್ ಸರ್ಕಲ್ ಬಳಿ ಸೋಮವಾರ ಮದ್ಯಾಹ್ನ 2.30 ರ ವೇಳೆಗೆ ಮಂಗಳೂರು ಮಹಾನಗರ ಪಾಲಿಕೆ ಅಳವಡಿಸಿದ ವಿದ್ಯುತ್ ದಾರಿದೀಪ ಚಲಿಸುವ ಮಾರುತಿ ವ್ಯಾನಿಗೆ ಬಿದ್ದು ಓರ್ವನಿಗೆ ಗಾಯವಾಗಿದೆ.

ಆಶಿಪ್ ಎಂಬವರು ಕೆ.ಎ 19 ಎಂ 6427 ಕಾರಿನಲ್ಲಿ ಸ್ಟೇಟ್‌ಬ್ಯಾಂಕ್ ಸಮೀಪದ ರಾವ್ ಆಂಡ್ ರಾವ್ ಸರ್ಕಲ್ ಹತ್ತಿರ ಚಲಿಸುತಿದ್ದ ಸಂದರ್ಭ ವಿದ್ಯುತ್ ದಾರಿದೀಪ ಆಕಸ್ಮಿಕವಾಗಿ ಬಿದ್ದು ಕಾರು ಜಖಂಗೊಂಡಿದೆ. ಅದರಲ್ಲಿದ್ದ ಆಶಿಪ್ ಅವರಿಗೆ ಗಾಯವಾಗಿದ್ದು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

Car Accidentಈ ರಸ್ತೆಯಲ್ಲಿ ಈ ಹಿಂದೆಯೂ ಇನ್ನೆರಡು ದಾರಿದೀಪ ಇವೇ ತರಹ ಮುರಿದು ಬಿದ್ದು ಜನ ಅಪಾಯದಿಂದ ಪಾರಾಗಿದ್ದರು. ಘಟನಾ ಸ್ಥಳಕ್ಕೆ ಮಂಗಳೂರು ದಕ್ಶಿಣ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Car Accident

Car Accident

Car Accident

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English