ಮಂಗಳೂರು : ಹಾಸನ ಕಲಂದರ್ ಯಾನೆ ರವಿ ಎಂಬಾತ 4 ದಿನಗಳ ಹಸುಳೆಯನ್ನು ಹಣದ ಆಸೆಗಾಗಿ ಬೋಳಾರದ ಅನ್ವರ್ ಎಂಬವನಿಗೆ ಮಾರಾಟ ಮಾಡಿದ್ದಾನೆ. ಅನ್ವರ್ ಎಂಬಾತ 2000 ರೂ.ಗಳಿಗೆ ಮಗುವನ್ನು ಖರೀದಿಸಿದ್ದ ಎಂದು ವಿಚಾರಣೆಯ ವೇಳೆ ಹೇಳಿದ್ದಾನೆ.
ಮೋರ್ಗನ್ಸ್ ಗೇಟ್ನಲ್ಲಿ ಮಗು ಮಾರಾಟ ಯತ್ನ ಪ್ರಕರಣದಲ್ಲಿ ಶನಿವಾರ ರಾತ್ರಿ ಬಂಧಿತನಾಗಿರುವ ಅನ್ವರ್ ನನ್ನು ರವಿವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಆತನಿಗೆ ಸೆ. 8 ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆರ್ಥಿಕ ಸಂಕಷ್ಟದ ಕಾರಣ ಕಲಂದರ್ ಯಾನೆ ರವಿ ತನ್ನ ಎರಡನೇ ಗಂಡು ಮಗುವನ್ನು ಪತ್ನಿ ಲಕ್ಷ್ಮಿಗೆ ತಿಳಿಯದಂತೆ ಶುಕ್ರವಾರ ಮಾರಾಟ ಮಾಡಿದ್ದನು. ಮಾರಾಟ ಮಾಡಿದ ತಂದೆ ಹಾಸನ ಕಲಂದರ್ ಯಾನೆ ರವಿ ತಲೆಮರೆಸಿಕೊಂಡಿದ್ದು ಇನ್ನೂ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Click this button or press Ctrl+G to toggle between Kannada and English