ನರೇಂದ್ರ ಮೋದಿ ಹಿಂಸಾಚಾರವನ್ನು ವಿರೋಧಿಸಿದರೆ, ಶಿಷ್ಯರು ಹಿಂಸಾಚಾರ ನಡೆಸುತ್ತಿದ್ದಾರೆ

12:28 AM, Thursday, December 7th, 2017
Share
1 Star2 Stars3 Stars4 Stars5 Stars
(No Ratings Yet)
Loading...

Raiಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಧರ್ಮದ ಹಿಂಸಾಚಾರವನ್ನು ವಿರೋಧಿಸುವುದಾಗಿ ಹೇಳಿದರೆ, ಅವರ ಶಿಷ್ಯರು ಧರ್ಮದ ಹೆಸರಿನಲ್ಲಿ ಹಿಂಸೆಗೆ ಪ್ರಚೋದಿಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ರಾಜ್ಯ ಬಿಜೆಪಿ ಮುಖಂಡರನ್ನು ಟೀಕಿಸಿದ್ದಾರೆ.

ಮೋದಿಯವರ ಶಿಷ್ಯರು ಧರ್ಮ, ದೇವರು, ದೇಶಪ್ರೇಮದ ಹೆಸರಿನಲ್ಲಿ ಹಿಂಸಾಚಾರ ನಡೆಸುತ್ತಿದ್ದಾರೆ. ಇಂತಹ ಶಿಷ್ಯರಿಗೆ ಎಂದಿಗೂ ಜನಸಾಮಾನ್ಯರು ಮಣೆ ಹಾಕಬಾರದು ಎಂದರು. ಈ ನಿಟ್ಟಿನಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ಕಾನೂನಿಗಿಂತ ಮೇಲೆ ಹೋಗಿದ್ದಾರೆ. ಸಂಸದರಿಗೆ ಕಾನೂನು ಎಂಬುದು ತಿಳಿಯದಿದ್ದರೆ ಸಾಮಾನ್ಯರ ಕಥೆ ಏನು ಎಂದು ಪ್ರಶ್ನಿಸಿದರು.

ಸರ್ಕಾರದ ಅಧಿಕೃತ ವಾಹನದಲ್ಲಿ ಚಾಲಕನನ್ನು ಬಿಟ್ಟು ವಾಹನ ಚಾಲನೆ ಮಾಡಕೂಡದು. ಅದರಲ್ಲೂ ಬ್ಯಾರಿಕೇಡ್‌ ಮುರಿದು ಸರ್ಕಾರದ ವಾಹನವನ್ನು ದುರ್ಬಳಕೆ ಮಾಡಿರುವುದು ದೊಡ್ಡ ಅಪರಾಧ ಎಂದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English