ಬಂಟ್ವಾಳ ತಾಲ್ಲೂಕಿನ ನಾವೂರು: ಗಂಡು ಕರು ಸಾಗಣೆ- ಗುಂಪಿನಿಂದ ಇಬ್ಬರ ಮೇಲೆ‌ ಹಲ್ಲೆ

4:48 PM, Thursday, December 21st, 2017
Share
1 Star2 Stars3 Stars4 Stars5 Stars
(5 rating, 1 votes)
Loading...

bantwal-talukಮಂಗಳೂರು: ಬಂಟ್ವಾಳ ತಾಲ್ಲೂಕಿನ ನಾವೂರು ಗ್ರಾಮದ ಹಳೆಗೇಟು ಎಂಬಲ್ಲಿ ದನದ ಗಂಡು ಕರುವೊಂದನ್ನು ಸರಕು ಸಾಗಣೆ ರಿಕ್ಷಾ ಸಾಗಿಸುತ್ತಿದ್ದ ಇಬ್ಬರ ಮೇಲೆ‌ ಗುಂಪೊಂದು ಮಂಗಳವಾರ ರಾತ್ರಿ ಹಲ್ಲೆ‌ ನಡೆಸಿದೆ.

ಸಮೀಪದ ಕಕ್ಕೆಪದವು ಉಳಿ ನಿವಾಸಿ ಪೂವಪ್ಪ ನಾಯ್ಕ ಮತ್ತು ರಿಕ್ಷಾ ಚಾಲಕ ಸೈಯದ್ ಇಬ್ರಾಹಿಂ ಹಲ್ಲೆಗೊಳಗಾದವರು. ರಿಕ್ಷಾದಲ್ಲಿ ಕರು ಸಾಗಿಸುತ್ತಿರುವುದನ್ನು ಕಂಡ ಸ್ಥಳೀಯ 25 ಕ್ಕೂ ಹೆಚ್ಚು ಮಂದಿಯ ಗುಂಪು ವಾಹನ ತಡೆದು ಹಲ್ಲೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇಬ್ಬರ ಮೇಲೆ ಹಲ್ಲೆ ನಡೆಸಿದ ಗುಂಪು ಅವರನ್ನು ಪೊಲೀಸ್ ವಶಕ್ಕೆ ನೀಡಿದೆ. ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ವಿಚಾರಣೆ ನಡೆಸಿದಾಗ, ಸಾಕುವುದಕ್ಕಾಗಿ ಕರು ಸಾಗಿಸುತ್ತಿದ್ದುದಾಗಿ ಹಲ್ಲೆಗೊಳಗಾದವರು ಹೇಳಿಕೆ ನೀಡಿದ್ದಾರೆ.

ಹಲ್ಲೆಗೊಳಗಾದವರ ದೂರಿನಂತೆ ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಆ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English