ದಾನಗಳಲ್ಲಿ ರಕ್ತದಾನವೇ ಶ್ರೇಷ್ಠ: ರಾಜಶೇಖರ ಹೆಬ್ಬಾರ್‌

10:37 AM, Tuesday, December 26th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

blood-donationಮಂಗಳೂರು: ಡಾ ಪಿ. ದಯಾನಂದ ಪೈ- ಪಿ. ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿಯ ಯುವ ರೆಡ್‌ಕ್ರಾಸ್‌ ಮತ್ತು ರೋವರ್- ರೇಂಜರ್ ವತಿಯಿಂದ ಬೆಂದೂರ್‌ವೆಲ್‌ನ ಲಯನ್ಸ್‌ ಕ್ಲಬ್‌ ಸಹಯೋಗದಲ್ಲಿ 197ನೇ ರಕ್ತದಾನ ಶಿಬಿರವು ಜರಗಿತು. ಪ್ರಾಂಶುಪಾಲ ಪ್ರೊ| ರಾಜಶೇಖರ್‌ ಹೆಬ್ಟಾರ್‌ ಅವರು ಅಧ್ಯಕ್ಷತೆ ವಹಿಸಿದ್ದರು. ರಕ್ತದಾನಕ್ಕಿಂತ ಶ್ರೇಷ್ಠವಾದ ದಾನ ಇನ್ನೊಂದಿಲ್ಲ ಎಂದರು.

ಲಯನ್ಸ್‌ ಕ್ಲಬ್‌ನ ಉಪ ಗವರ್ನರ್‌ ಕೆ. ದೇವದಾಸ ಭಂಡಾರಿ ಮುಖ್ಯ ಅತಿಥಿಯಾಗಿದ್ದರು. ಲಯನ್ಸ್‌ ಕ್ಲಬ್‌ನ ಅಧ್ಯಕ್ಷ ನಾಗೇಶ್‌ ಕುಮಾರ್‌ಎನ್‌.ಜೆ., ಕಾರ್ಯದರ್ಶಿ ದೇರಣ್ಣ, ಖಂಜಾಚಿ ಅನಂತ್‌ ಶೇಟ್‌ ಉಪಸ್ಥಿತರಿದ್ದರು.

ಸದಸ್ಯ ನರೇಶ್‌, ಡಾ ಗಣೇಶ್‌ ಕುಮಾರ್‌, ವಿಟ್ಠಲ್‌ ಆಚಾರ್‌, ರಾಮ್‌ ಗಣೇಶ್‌, ಅಶೋಕ್‌ ಕುಮಾರ್‌, ಕಾಲೇಜಿನ ಯುವ ರೆಡ್‌ ಕ್ರಾಸ್‌ನ ಸಂಯೋಜಕ ಪ್ರೊ| ಮಹೇಶ್‌ ಕೆ.ಬಿ. ಹಾಗೂ ರೋವರ್ ರೇಂಜರ್ನ ಸಂಯೋಜಕ ಪ್ರೊ ಪುರುಷೋತ್ತಮ ಭಟ್‌ ಅವರು ಉಪಸ್ಥಿತರಿದ್ದರು.

ರಕ್ತದಾನ
ಶಿಬಿರದಲ್ಲಿ 105 ವಿದ್ಯಾರ್ಥಿಗಳು ರಕ್ತದಾನ ಮಾಡಿದ್ದಾರೆ. ಯಶ್ವಸಿನಿ ಸ್ವಾಗತಿಸಿದರು. ಯುವ ರೆಡ್‌ಕ್ರಾಸ್‌ನ ಉನೇಹಾ ಹರಿದಾಸ್‌ ನಿರೂಪಿಸಿದರು. ಶಿವಾನಿ ವಂದಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English