ಮಂಗಳೂರು: ಮದುವೆಯ ಮೆಹಂದಿ ಮುನ್ನಾ ದಿನ ಪ್ರಿಯಕರನ ಜೊತೆ ನಾಪತ್ತೆಯಾಗಿ, ಲವ್ ಜಿಹಾದ್ ಎಂದು ಶಂಕಿಸಲ್ಪಟ್ಟ ಪ್ರಕರಣದ ವಧು ಶುಕ್ರವಾರ ಮಂಗಳೂರು ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಆಹಾರದಲ್ಲಿ ಅಮಲಿನ ಪದಾರ್ಥ ಹಾಕಿ ಮನೆಯವರಿಗೆ ನೀಡಿದ್ದ ಆರೋಪದಲ್ಲಿ ಬಂಧಿತರಾಗಿ ಜೈಲು ಸೇರಿದ್ದ ವಧು ಜೈಲಿನಿಂದ ಹೊರ ಬರುತ್ತಿದ್ದಂತೆ ಮನೆಯವರನ್ನು ಕಂಡು ಅವರೊಂದಿಗೆ ಮನೆಗೆ ಹೋಗಲು ಮೊದಮೊದಲು ನಿರಾಕರಿಸಿ, ಬಳಿಕ ಮನೆಗೆ ತೆರಳಿದರು ಎಂದು ತಿಳಿದುಬಂದಿದೆ.
ಯುವತಿಯ ಮದುವೆ ಡಿ.11ರಂದು ನಿಗದಿಯಾಗಿ, ಡಿ.9ರಂದು ಮೆಹಂದಿ ಕಾರ್ಯಕ್ರಮವಿತ್ತು. ಆದರೆ, ಡಿ.8ರಂದು ರಾತ್ರಿ ಮನೆಯವರು ಊಟ ಮಾಡಿ ಮಲಗಿದ್ದ ವೇಳೆ ವಧು ತನ್ನ ಪ್ರಿಯಕರ ಜೊತೆ ನಾಪತ್ತೆಯಾಗಿದ್ದರು.
ಚಿನ್ನಾಭರಣ ಹಾಗೂ ಬಟ್ಟೆಗಳೊಂದಿಗೆ ಮನೆಯಿಂದ ಯುವತಿ ನಾಪತ್ತೆಯಾಗಿದ್ದ ಬಗ್ಗೆ ಡಿ. 9ರಂದು ದೂರು ದಾಖಲಾಗಿತ್ತು. ಬಳಿಕ, ಪಣಂಬೂರು ಮತ್ತು ಮೂಡುಬಿದಿರೆ ಪೊಲೀಸರ ತನಿಖಾ ತಂಡ ಕಾರ್ಯಾಚರಣೆ ಕೈಗೊಂಡು ಯುವತಿ, ಆಕೆಯ ಪ್ರಿಯಕರನನ್ನು ಮುಂಬೈಯಲ್ಲಿ ಪತ್ತೆ ಹಚ್ಚಿ ಮಂಗಳೂರಿಗೆ ಕರೆ ತಂದಿದ್ದರು.
Click this button or press Ctrl+G to toggle between Kannada and English