ಅನ್ನಭಾಗ್ಯ ದೇಶಕ್ಕೇ ಮಾದರಿ ಯೋಜನೆ: ಯು.ಟಿ. ಖಾದರ್

5:50 PM, Thursday, January 18th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

u-t-kaderಮಂಗಳೂರು: ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆ ದೇಶಕ್ಕೆ ಮಾದರಿ ಯೋಜನೆಯಾಗಿದೆ. ಯೋಜನೆಯನ್ನು ಆನ್ ಲೈನ್ ವ್ಯವಸ್ಥೆಗೆ ಪರಿವರ್ತಿಸಿದ್ದು ಬೋಗಸ್ ಕಾರ್ಡ್‌ಗಳನ್ನು ಪತ್ತೆ ಹಚ್ಚಿ ಬೊಕ್ಕಸಕ್ಕೆ ಕೋಟ್ಯಾಂತರ ರೂ.ಗಳ ಉಳಿತಾಯ ಮಾಡಿದ್ದೇವೆ ಎಂದು ಆಹಾರ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಆಹಾರ ಇಲಾಖೆಗೆ ರಾಷ್ಟ್ರ ಮಟ್ಟದ ಅವಾರ್ಡ್ ಬಂದಿದೆ. ಜನಜಾಗೃತಿ, ಪಡಿತರ ವಿತರಣೆಗಾಗಿ ಈ ಅವಾರ್ಡ್ ಬಂದಿದೆ. ಹಿಂದಿನ ಸಚಿವರು, ಇಲಾಖೆಯ ಎಲ್ಲ ಸಿಬ್ಬಂದಿಗಳ ಶ್ರಮಕ್ಕೆ ಇದರ ಶ್ರೇಯಸ್ಸು ಸಲ್ಲಿಕೆಯಾಗಬೇಕು ಎಂದರು.

ಹಿಂದಿನ ಸರ್ಕಾರ ಬಿಪಿಎಲ್ ಕಾರ್ಡ್ ಸರಿಯಾಗಿ ವಿತರಿಸಿರಲಿಲ್ಲ, ಆಗ ಸಾಕಷ್ಟು ಗೊಂದಲ ಮೂಡಿಸಿತ್ತು, ಆದರೆ ನಮ್ಮ ಸರ್ಕಾರದಲ್ಲಿ ಉತ್ತಮ ಕೆಲಸ ಮಾಡಿದ್ದೇವೆ, ಬಿಪಿಎಲ್ ಪಡಿತರ ವಿತರಣೆಯಲ್ಲಿ ನಾವು ಉತ್ತಮ ಕೆಲಸ ಮಾಡಿದ್ದೇವೆ. 33.70 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ನಾಲ್ಕುವರೆ ವರ್ಷದಲ್ಲಿ ವಿತರಿಸಿದ್ದೇವೆ. ಒಂದೂವರೆ ಕೋಟಿ ಜನರು ಸೌಲಭ್ಯ ಪಡೆಯುತ್ತಿದ್ದಾರೆ. ಎಲ್ಲವನ್ನೂ ಪಾರದರ್ಶಕ ಅನ್ ಲೈನ್ ವ್ಯವಸ್ಥೆಯಡಿ ತಂದಿದ್ದೇವೆ. ಲಕ್ಷಾಂತರ ಬೋಗಸ್ ಕಾರ್ಡ್ ಪತ್ತೆಹಚ್ಚಿದ್ದೇವೆ. ಸರ್ಕಾರಕ್ಕೆ ಕೋಟ್ಯಂತರ ರೂ. ಉಳಿತಾಯ ಮಾಡಿದ್ದೇವೆ, ಕನ್ನಭಾಗ್ಯ ಆರೋಪಕ್ಕೆ ತಕ್ಕ ಉತ್ತರ ನೀಡಿದ್ದೇವೆ ಎಂದು ಬಿಜೆಪಿಗೆ ತಿರುಗೇಟು ನೀಡಿದರು.

ಗುಜರಾತ್, ಛತ್ತೀಸ್‌ಗಡ, ಉತ್ತರಪ್ರದೇಶದಲ್ಲಿ ಬಿಜೆಪಿ‌ ಸರ್ಕಾರವಿದೆ. ಆದರೆ ಬಿಜೆಪಿ ಸರ್ಕಾರದಲ್ಲಿ ಇಂತಹ ಉತ್ತಮ ಯೋಜನೆಯಿಲ್ಲ, ಅನ್ನಭಾಗ್ಯದಂತ ಯೋಜನೆ ಸೌಲಭ್ಯವಿಲ್ಲ, ದೇಶದಲ್ಲೇ ಕರ್ನಾಟಕ ಮಾದರಿಯಾಗಿದೆ. ಉತ್ತಮ ಯೋಜನೆ ರೂಪಿಸಿದ ಸರ್ಕಾರವಾಗಿ ಮಾದರಿಯಾಗಿದೆ. ಏಳು ಕೆಜಿ ಪಡಿತರವನ್ನು ಪ್ರತಿಯೊಬ್ಬರಿಗೆ ನೀಡುತ್ತಿದ್ದೇವೆ, ಇದು ಬಿಜೆಪಿ ರಾಜ್ಯಗಳಲ್ಲಿ ಇದೆಯೇ ಎಂದು ಪ್ರಶ್ನಿಸಿದರು.

ನಮ್ಮ ರಾಜ್ಯಕ್ಕೆ ಕೇಂದ್ರದಿಂದ ಅನ್ಯಾಯವಾಗಿತ್ತಿದೆ. ಅನುದಾನ ನೀಡಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದ. ರಾಜ್ಯದ ಸಂಸದರು ಇದರ ಬಗ್ಗೆ ಧ್ವನಿ ಎತ್ತಬೇಕು, ಆದರೆ ಬಿಜೆಪಿ ಸಂಸದರು ಇದರ ಬಗ್ಗೆ ಧ್ವನಿ ಎತ್ತುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈಗ ದಾಸೋಹ ಯೋಜನೆ ಹಮ್ಮಿಕೊಂಡಿದ್ದೇವೆ, ವಸತಿ ಮತ್ತು ಊಟ ಒದಗಿಸುವ ಯೋಜನೆ ಇದಾಗಿದೆ. 28 ಸಾವಿರ ಜನಸಾಮಾನ್ಯರಿಗೆ ಅನುಕೂಲವಾಗಲಿದೆ. ಸಾವಿರಾರು ಸಂಸ್ಥೆಗಳಲ್ಲಿರುವ ನಿರ್ಗತಿಕರು, ವೃದ್ಧರಿಗೆ ಅನುಕೂಲವಾಗಲಿದೆ ಎಂದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English