ಬಡ ಸಂತ್ರಸ್ತೆಯ ಹಣ ಮರಳಿ ದೊರಕಿಸಿಕೊಟ್ಟ ಎಸ್ಐ ನಿಷ್ಠೆಗೆ ಸಾರ್ವಜನಿಕರ ಶ್ಲಾಘನೆ

11:41 AM, Saturday, February 3rd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

nanda-kumarಮಂಗಳೂರು: ಬಡವರ ದುಡ್ಡು ನುಂಗುವ ಅಧಿಕಾರಿಗಳಿಂದ ಕಸಿದು ಮತ್ತೆ ಬಡವರಿಗೆ ಹಂಚಿದ ನಿಷ್ಠಾವಂತ ಎಸ್ಐ ನಂದಕುಮಾರ್ ಅವರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ 2016ರಲ್ಲಿ ರಸ್ತೆ ಸಮೀಪದ ಮನೆಗಳನ್ನು ತೆರವುಗೊಳಿಸಿ, ಸಂತ್ರಸ್ತರಿಗೆ ಪರಿಹಾರವನ್ನೂ ನೀಡಿತ್ತು. ಆದರೆ ಆ ಸಂದರ್ಭ ಬಡ ಕುಟುಂಬದ ಮಹಿಳೆಯೊಬ್ಬರಿಗೆ ಭೂ ಸ್ವಾಧೀನ ಮಾಡಿದ ಹೆದ್ದಾರಿ ಪ್ರಾಧಿಕಾರ 5.20ಲಕ್ಷ ರೂ. ಪರಿಹಾರ ನೀಡಬೇಕಿತ್ತು. ಆದರೆ, ಮಧ್ಯವರ್ತಿಗಳ ತಂಡವೊಂದು 4.30ಲಕ್ಷ ರೂ. ವಂಚನೆ ಮಾಡಿತ್ತು.

ಇದರಿಂದ ನೊಂದ ಆ ಮಹಿಳೆ ಉಪ್ಪಿನಂಗಡಿ ಠಾಣೆಯ ಎಸ್ಐ ನಂದಕುಮಾರ್ ಅವರಲ್ಲಿ ನೋವನ್ನು ತೋಡಿಕೊಂಡರು. ಮಧ್ಯವರ್ತಿಗಳಿಂದ ವಂಚನೆಗೊಳಗಾದ ಮಾಹಿತಿ ಕಲೆಹಾಕಿದ ಎಸ್ಐ, ವಂಚಿಸಿದ ಅಷ್ಟೂ ಹಣವನ್ನು 24 ಗಂಟೆಯೊಳಗೆ ಬಡ ಮಹಿಳೆಗೆ ತಲುಪಿಸುವ ಮೂಲಕ ಮಾದರಿಯಾಗಿದ್ದಾರೆ.

ಹೀಗೆ ಎಸ್ಐ ನಂದಕುಮಾರ್ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English