ಉಸಿರುಗಟ್ಟಿಸಿ ಬ್ಯಾಂಕ್ ಮ್ಯಾನೇಜರ್ ಕೊಲೆ

11:30 AM, Monday, September 26th, 2011
Share
1 Star2 Stars3 Stars4 Stars5 Stars
(No Ratings Yet)
Loading...

BANK MANAGER

ಬೆಂಗಳೂರು : ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನು ಅವರು ವಾಸವಾಗಿರುವ ಮನೆಯಲ್ಲೇ ಉಸಿರುಗಟ್ಟಿಸಿ ಹತ್ಯೆ ಮಾಡಿರುವ ಘಟನೆ ಶನಿವಾರ ರಾತ್ರಿ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಓರಿಯೆಂಟಲ್ ಬ್ಯಾಂಕ್ ನಲ್ಲಿ ಚೀಫ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪಡುಕೋಣೆ ಮೂಲದ ಶಂಕರ್ ಪೂಜಾರಿ (55) ಅವರ ಕೊಲೆ ನಡೆದಿರುವುದು ಬೆಳಕಿಗೆ ಬಂದಿದ್ದು, ಭಾನುವಾರ ರಾತ್ರಿ ವೇಳೆಗೆ ಕೊಲೆ ನಡೆದಿರಬಹುದು ಎಂದು ಡೆಪ್ಯುಟಿ ಕಮಿಷನರ್ ಸೋನಿಯಾ ನಾರಂಗ್ ತಿಳಿಸಿದ್ದಾರೆ.

ಕೊಲೆಯನ್ನು ಪೂಜಾರಿಗೆ ಬಲ್ಲವರೇ ಮಾಡಿರಬಹುದೆಂದು ಶಂಕಿಸಲಾಗಿದ್ದು. ಹೊರಬಾಗಿಲಿಗೆ ಒಳಗಿನಿಂದ ಚಿಲಕ ಹಾಕಿರಲಿಲ್ಲ ಮತ್ತು ಯಾವುದೇ ವಸ್ತುವೂ ಕಳುವಾಗಿಲ್ಲ. ಪೂಜಾರಿಯನ್ನು ಬೆಡ್ ಶೀಟಿನಿಂದ ಉಸಿರುಗಟ್ಟಿಸಿ ಹತ್ಯೆಗೈಯಲಾಗಿದೆ.

ಕೆಲ ವಸ್ತುಗಳಿಗೆ ಹುಡುಕಾಡಿದ ಕುರುಹು ಪತ್ತೆಯಾಗಿದ್ದು, ಕಪಾಟುಗಳು ತೆರೆದುಕೊಂಡಿದ್ದವು. ಅವರ ಪರ್ಸ್ ಮತ್ತು ಮೊಬೈಲ್ ಸ್ಥಳದಲ್ಲೇ ಇತ್ತು. ರಾತ್ರಿ 9ರಿಂದ 11ರವರೆಗೆ ಈ ಘಟನೆ ಸಂಭವಿಸಿದೆ ಎಂದು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ.

ಶಂಕರ್ ಅವರಿಗೆ ಊಟ ತಂದುಕೊಡುವ ಹುಡುಗ ಮನೆಗೆ ಊಟ ತಂದು ಕಾಲಿಂಗ್ ಬೆಲ್ ಬಾರಿಸಿದರೂ ಪೂಜಾರಿ ಬಾಗಿಲು ತೆರೆಯಲಿಲ್ಲ ಮತ್ತು ಬಾಗಿಲನ್ನು ತಳ್ಳಿದಾಗ ತಾನೇ ತೆರೆದುಕೊಂಡಿತು.

ಪೂಜಾರಿಯವರು ಬೆಂಗಳೂರಿನಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಅವರು ಪತ್ನಿ ಮತ್ತು ಮಕ್ಕಳು ಮುಂಬೈನಲ್ಲಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪೋಸ್ಟ್ ಮಾರ್ಟಂಗಾಗಿ ಶವವನ್ನು ರವಾನಿಸಿದ್ದಾರೆ.

2 ಪ್ರತಿಕ್ರಿಯ - ಶೀರ್ಷಿಕೆ - ಉಸಿರುಗಟ್ಟಿಸಿ ಬ್ಯಾಂಕ್ ಮ್ಯಾನೇಜರ್ ಕೊಲೆ

  1. oruwjbi, cjxqjdzmealf.com/

    ea5Nfv rrqqkvrhjyqz, [url=http://mrzzotnmlcbv.com/]mrzzotnmlcbv[/url], [link=http://nohgeqwbzbkw.com/]nohgeqwbzbkw[/link], http://oscdnwpwzerh.com/

  2. ylojfty, yozeznclzwsf.com/

    myUo7E sibrjslvcwda, [url=http://bhfakyuzedco.com/]bhfakyuzedco[/url], [link=http://ckddqzhnejfn.com/]ckddqzhnejfn[/link], http://cptmeaafdgbs.com/

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English