ಸಿಎಂ ಸಿದ್ದರಾಮಯ್ಯ ಓರ್ವ ಭಯೋತ್ಪಾದಕ: ಸಂಸದ ಕಟೀಲು ವಿವಾದಾತ್ಮಕ ಹೇಳಿಕೆ

3:21 PM, Tuesday, March 6th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

nalin-kumarಮಂಗಳೂರು: ಬಿಜೆಪಿ ಆಯೋಜನೆಯ ಜನಸುರಕ್ಷಾ ಯಾತ್ರೆಯಲ್ಲಿ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ಮಾಡುವ ಟೀಕಾ ಪ್ರಹಾರಗಳು ಕರಾವಳಿಯಲ್ಲೂ ಮುಂದುವರಿದಿವೆ.

ಈ ಬಾರಿ ಸಂಸದ ನಳಿನ್ ಕುಮಾರ್ ಕಟೀಲು `ಮುಖ್ಯಮಂತ್ರಿ ಸಿದ್ದರಾಮಯ್ಯ ಓರ್ವ ಭಯೋತ್ಪಾದಕ’ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬಂಟ್ವಾಳದಲ್ಲಿ ನಡೆದ `ಮಂಗಳೂರು ಚಲೋ’ ಜನ ಸುರಕ್ಷಾ ಯಾತ್ರೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಭಯೋತ್ಪಾದನೆ ಮಾಡುವ ಶಕ್ತಿಗಳ ಹಿಂದಿದ್ದಾರೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಬಳಿ ಭಯ ಉತ್ಪಾದನೆ ಮಾಡುವ ಶಕ್ತಿ ಇದೆ ಎಂದ ಸಂಸದ ಕಟೀಲು, ಸಂಘ ಪರಿವಾರದ ಕಾರ್ಯಕರ್ತರ ಹತ್ಯೆಯಾದರೆ ಸಿದ್ದರಾಮಯ್ಯ ಸುಮ್ಮನಿರುತ್ತಾರೆ. ಅಲ್ಪಸಂಖ್ಯಾತರ ತುಷ್ಟೀಕರಣದ ಮೂಲಕ ರಾಜಕೀಯ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ತುಳುನಾಡಿನಲ್ಲಿ ಮಾರಿ ಓಡಿಸುವ (ಮಾರಿ ಗಿಡಪುನಿ) ಸಂಪ್ರದಾಯವಿದೆ. ಜಿಲ್ಲೆಯಲ್ಲಿ ಮೂರು ಮಾರಿಗಳನ್ನು ಓಡಿಸುವ ಯಾತ್ರೆ ಸಾಗಿದೆ. ಒಂದು ಮಾರಿ ಕಾಂಗ್ರೆಸ್ ಪಕ್ಷವಾದರೆ, ಇನ್ನೊಂದು ಸಿದ್ದರಾಮಯ್ಯ, ಮತ್ತೊಂದು ಸಚಿವ ರಮಾನಾಥ ರೈ ಎಂದರು. ಈ ಮೂರು ಮಾರಿಗಳನ್ನು ಕೇರಳಕ್ಕೆ ಓಡಿಸೋಣ. ಆಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಹರಿಹಾಯ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English