ಇಂದಿರಾ ಕ್ಯಾಂಟೀನ್‌ಗೆ ಹಾನಿ

4:29 PM, Wednesday, March 7th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

canteenಮಂಗಳೂರು: ನಗರದ ಪುರಭವನದ ಸಮೀಪ ಮಂಗಳವಾರ ಉದ್ಘಾಟನೆಗೊಂಡ ಇಂದಿರಾ ಕ್ಯಾಂಟೀನ್‌ಗೆ ರಾತ್ರಿ ದುಷ್ಕರ್ಮಿಗಳು ಹಾನಿಗೈದಿದ್ದಾರೆ.

ಕ್ಯಾಂಟೀನ್‌ನ ಕೈತೊಳೆಯುವ ನೀರಿನ ನಳ್ಳಿ ಹಾಗೂ ಶೌಚಾಲಯದ ಬಾಗಿಲಿಗೆ ಹಾನಿ ಉಂಟು ಮಾಡಿರುವುದು ಬುಧವಾರ ಮುಂಜಾನೆ ಬೆಳಕಿಗೆ ಬಂತು. ತಕ್ಷಣ ಸಂಬಂಧಪಟ್ಟವರು ಪೊಲೀಸರಿಗೆ ದೂರು ನೀಡಿದ್ದಾರೆ.

ರಾಜ್ಯ ಸರಕಾರದ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಆಹಾರ ಸಚಿವ ಯು.ಟಿ.ಖಾದರ್ ಮಂಗಳವಾರ ಉದ್ಘಾಟಿಸಿದ್ದರು. ಇದರ ಬೆನ್ನಿಗೆ ಕ್ಯಾಂಟೀನ್‌ನಲ್ಲಿ ತಿಂಡಿತಿನಿಸಿಗೆ ನೂಕುನುಗ್ಗಲು ಉಂಟಾಗಿತ್ತು. ಉರ್ವಸ್ಟೋರ್‌ನಲ್ಲಿ ಕೆಲ ದಿನಗಳ ಹಿಂದೆ ಇಂದಿರಾ ಕ್ಯಾಂಟೀನ್ ಕಟ್ಟಡದ ಮುಂಭಾಗದಲ್ಲಿ ಅಳವಡಿಸಿರುವ ಇಂದಿರಾ ಗಾಂಧಿ ಭಾವಚಿತ್ರಕ್ಕೆ ಹಾನಿಗೈದಿದ್ದ ದುಷ್ಕರ್ಮಿಗಳು ಇದೀಗ ಪುರಭವನ ಬಳಿಯ ಕ್ಯಾಂಟೀನ್‌ನಲ್ಲೂ ದುಷ್ಕೃತ್ಯ ಎಸಗಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English