ಶಾಶ್ವತ ಸೂರು ನೀಡುವ ಕಾರ್ಯದಲ್ಲಿ ಯಶಸ್ವಿ: ಮೊದಿನ್ ಬಾವಾ

4:51 PM, Wednesday, March 21st, 2018
Share
1 Star2 Stars3 Stars4 Stars5 Stars
(5 rating, 1 votes)
Loading...

mohaiddin-bavaಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬಡ ವರ್ಗಕ್ಕೆ ಭೂಮಿಯ ಹಕ್ಕು ನೀಡುವ ಮೂಲಕ ಶಾಶ್ವತ ಸೂರು ನೀಡುವ ಕಾರ್ಯದಲ್ಲಿ ಯಶಸ್ವಿಯಾಗಿದೆ ಎಂದು ಶಾಸಕ ಮೊದಿನ್ ಬಾವಾ ಹೇಳಿದರು.

ಇಂದು ನಾನಾ ಸೌಲಭ್ಯದ ಫಲಾನುಭವಿಗಳಿಗೆ ಚೆಕ್ ಹಾಗೂ ಹಕ್ಕುಪತ್ರ ವಿತರಣೆಯ ಬಳಿಕ ಅವರು ಮಾತನಾಡುತ್ತಿದ್ದರು.

ಮಾಜಿ ಮುಖ್ಯ ಮಂತ್ರಿಗಳಾದ ಗುಂಡೂರಾವ್ ಮತ್ತು ಎಸ್.ಎಂ. ಕೃಷ್ಣ ಅವಧಿಯಲ್ಲಿ ಹಕ್ಕು ಪತ್ರ ನೀಡಿದ ಕಾಂಗ್ರೆಸ್ ಸರಕಾರ ಇದೀಗ ಹಕ್ಕು ಪತ್ರ ನೀಡುವ ಕೆಲಸ ಮಾಡಿದೆ.

ಹಕ್ಕುಪತ್ರ ನೀಡುವ ಕಾನೂನು ಜಾರಿಗೊಳಿಸಿದ ರಾಜ್ಯ ಸರಕಾರವು ಜನಪರ ಕಾಳಜಿಯಿಂದಾಗಿ ರಾಜ್ಯಾದ್ಯಂತ ಲಕ್ಷಾಂತರ ಹಾಗೂ ಮಂಗಳೂರು ಕ್ಷೇತ್ರದಲ್ಲಿ 15 ವರ್ಷಗಳಿಂದ ಆತಂಕದಲ್ಲಿದ್ದ ಸುಮಾರು 9000 ಸಾವಿರಕ್ಕೂ ಅಧಿಕ ಕುಟುಂಬಗಳು ನೆಮ್ಮದಿ ಕಾಣುವಂತಾಗಿದೆ. ಹಕ್ಕುಪತ್ರ ವಿತರಣೆ ಕುರಿತು ನ್ಯಾಯಾಲಯದಲ್ಲಿ ಇದ್ದಂತಹ ದಾವೆಗಳಲ್ಲಿ ಹೋರಾಡಿ ಕಾನೂನು ಸಡಿಲೀಕರಣಗೊಳಿಸಿ ಹಕ್ಕುಪತ್ರ ನೀಡುವ ಕ್ರಾಂತಿ ಮಾಡಿತು ಎಂದರು.

ಕಾಂಗ್ರೆಸ್ ಆಡಳಿತದಲ್ಲಿ ಬಡ ವರ್ಗಕ್ಕೆ ಉಚಿತ ಅಕ್ಕಿಯಿಂದ ಹಿಡಿದು ಸೂರಿನವರೆಗೆ ಕೊಟ್ಟ ಸರಕಾರ ಕಾಂಗ್ರೆಸ್ ಸರಕಾರ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಆಡಳಿತ ಮುಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರವನ್ನು ಗಳಿಸಲಿದೆ ಎಂದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English