ಶಾಸಕನ ವಿರುದ್ಧ ದೂರು ನೀಡಲು ಹೋದ್ರೆ ಸಿಎಂ ಯೋಗಿ ದೂರ ತಳ್ಳಿದರು: ವ್ಯಕ್ತಿಯ ಆರೋಪ

1:57 PM, Wednesday, April 4th, 2018
Share
1 Star2 Stars3 Stars4 Stars5 Stars
(No Ratings Yet)
Loading...

yogi-adithyanathಗೋರಖ್‌‌ಪುರ್‌: ಶಾಸಕರೊಬ್ಬರ ವಿರುದ್ಧ ದೂರು ಕೊಡಲು ಹೋದಾಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌‌ ನನ್ನನ್ನು ದೂರ ತಳ್ಳಿದ್ದಾರೆ ಎಂದು ವ್ಯಕ್ತಿಯೊಬ್ಬ ಆರೋಪಿಸಿದ್ದಾನೆ.

ಆಯೂಶ್‌ ಸಿಂಘಾಲ್‌ ಎಂಬಾತ ಇಂತಹ ಆರೋಪ ಮಾಡಿದ್ದು, ಗೋರಖ್‌‌ಪುರ್‌ನಲ್ಲಿ ನಡೆಯುತ್ತಿದ್ದ ‘ಜನತಾ ದರ್ಬಾರ್‌’ನಲ್ಲಿ ಸಿಎಂ ಯೋಗಿ ಆದಿತ್ಯನಾಥ್‌‌ ಅವರು ನನ್ನ ದೂರ ನೂಕಿದರು ಎಂದು ಸಿಂಘಾಲ್‌ ಹೇಳಿದ್ದಾರೆ.

ಶಾಸಕ ಅಮನ್‌ಮಣಿ ತ್ರಿಪಾಠಿ ನಮ್ಮ ಭೂಮಿಯನ್ನು ಕಬಳಿಸಿದ್ದಾರೆ. ಈ ಸಂಬಂಧ ಯೋಗಿ ಸಿಎಂ ಆದಿತ್ಯನಾಥ್‌‌ ಅವರ ಮೊರೆ ಹೋಗಿ, ನಾನು ದಾಖಲೆ ಪತ್ರಗಳನ್ನು ಕೊಟ್ಟು ವಿವರಿಸುತ್ತಿದ್ದೆ. ಆದರೆ, ಸಿಎಂ ನನ್ನ ಪತ್ರಗಳನ್ನು ಎಸೆದು, ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದರು ಅಂತ ಸಿಂಘಾಲ್‌ ದೂರಿದ್ದಾನೆ.

ಇತ್ತ, ಸಿಂಘಾಲ್‌ ಈ ಆರೋಪವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್‌ ಕೆ.ವಿಜಯೇಂದ್ರ ತಳ್ಳಿ ಹಾಕಿದ್ದಾರೆ. ಸಿಂಘಾಲ್‌ ಯಾವುದೇ ದಾಖಲೆಗಳು ಇಲ್ಲದೆ, ಬರಿಗೈಯಲ್ಲಿ ಬಂದಿದ್ದ. ಹೀಗಾಗಿ ಸಿಎಂ ಯೋಗಿ ಅರ್ಜಿ ತುಂಬಿಕೊಂಡು ಬರುವಂತೆ ಸಿಂಘಾಲ್‌ಗೆ ತಿಳಿಸಿದರು ಎಂದು ವಿಜಯೇಂದ್ರ ಸ್ಪಷ್ಟನೆ ನೀಡಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English