ಮತ್ತೆ ಕೊರಗಜ್ಜನ ದೈವಸ್ಥಾನಕ್ಕೆ ಖಾದರ್‌ ಭೇಟಿ, ವಿಶೇಷ ಪ್ರಾರ್ಥನೆ

4:37 PM, Monday, April 9th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

u-t-kaderಮಂಗಳೂರು: ಸಚಿವ ಯು.ಟಿ.ಖಾದರ್‌ರ ಹಿಂದೂ ದೇವಸ್ಥಾನಗಳ ಭೇಟಿಗೆ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆಯೂ ಖಾದರ್‌ ದೇವಸ್ಥಾನಗಳ ಭೇಟಿ ಮುಂದುವರೆಸಿದ್ದಾರೆ.

ಇಂದು ಖಾದರ್ ಮತ್ತೊಮ್ಮೆ ಕೊರಗಜ್ಜನ ದೈವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ನಗರದ ಹೊರವಲಯದ ತೊಕ್ಕೊಟ್ಟಿನಲ್ಲಿರುವ ಕೊರಗಜ್ಜನ ದೈವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಅರ್ಚಕರು ಖಾದರ್ ಎದುರಲ್ಲಿ ಕೊರಗಜ್ಜನಿಗೆ ಪ್ರಾರ್ಥಿಸುತ್ತಾ, ಯಾರು ಸತ್ಯದಲ್ಲಿ ನಡೆಯುತ್ತಾರೋ ಅಂತವರನ್ನು ಕೊರಗಜ್ಜ ಕೈಬಿಡುವುದಿಲ್ಲ ಎನ್ನುವ ಅಭಯ ನೀಡಿದ್ರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English