ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಶಾಸಕ ಸ್ಥಾನಕ್ಕೆ ನನ್ನ ಸ್ಪರ್ಧೆ: ಹುಚ್ಚ ವೆಂಕಟ್‌‌‌

5:30 PM, Wednesday, April 11th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

huccha-venkatಮಂಗಳೂರು: ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಶಾಸಕ ಸ್ಥಾನಕ್ಕೆ ನಾನು ಸ್ಪರ್ಧಿಸಲಿದ್ದು, ಮುಂದೊಂದು ದಿನ ಪ್ರಧಾನಮಂತ್ರಿ ಕೂಡ ಆಗುತ್ತೇನೆ ಎಂದು ನಟ ಹುಚ್ಚ ವೆಂಕಟ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹುಚ್ಚ ವೆಂಕಟ್, ನಾನು ಚುನಾವಣೆಗೆ ನಿಂತರೆ ಡ್ರಿಂಕ್ಸ್, ಸೀರೆ, ಹಣ ಕೊಡಲ್ಲ. ಚುನಾವಣೆಯಲ್ಲಿ ಮತ ನೀಡಿ ಎಂದು ಮನೆ ಮನೆಗೆ ತೆರಳಿ ಪ್ರಚಾರ ಮಾಡಲ್ಲ. ನಾನು ಯಾರ ಮುಂದೆಯು ಕೈಯನ್ನು ಮುಗಿಯಲ್ಲ. ನಾನ್ಯಾಕೆ ಬೇರೆ ರಾಜಕೀಯ ವ್ಯಕ್ತಿಗಳ ತರಹ ಕೈ ಮುಗಿಯಲಿ ಎಂದಿದ್ದಾರೆ.

ದುಡ್ಡು ಕೊಟ್ಟು ತಮಟೆ ಬಡಿಯೋ ಕೆಲಸ ಮಾಡಲ್ಲ. ಒಂದು ಸಲ ಡ್ರಿಂಕ್ಸ್, ಸೀರೆ, ಹಣ ಜನರು ತೆಗೆದುಕೊಂಡರೆ ಕೇವಲ ಒಂದು ತಿಂಗಳು ಉಪಯೋಗವಾಗಬಹುದು. ಆದರೆ ಆ ಬಳಿಕ ಐದು ವರ್ಷ ಅವರು ಕಷ್ಟಪಡಬೇಕಾಗುತ್ತೆ. ಕರಾವಳಿಯ ಮೀನುಗಾರರು ಇನ್ನೊಬ್ಬರನ್ನು ಮೀನು ತಿನ್ನಿಸಲು ಹೋಗಿ ತೊಂದರೆಯಲ್ಲಿ ಸಿಲುಕುವುದು ಬೇಡ. ಮಂಗಳೂರಿನಲ್ಲಿ ಅಡಿಕೆ ಫೇಮಸ್. ಮೀನುಗಾರರು ಜಮೀನು ತೆಗೆದುಕೊಂಡು ಅಡಿಕೆ ಕೃಷಿ ಮಾಡಿ ಎಂದು ಸಲಹೆ ನೀಡಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English