ಬೆಳ್ತಂಗಡಿಯಲ್ಲಿ ಹರೀಶ್ ಪೂಂಜ ಸೋಮವಾರ ನಾಮಪತ್ರ ಸಲ್ಲಿಕೆ

5:30 PM, Saturday, April 21st, 2018
Share
1 Star2 Stars3 Stars4 Stars5 Stars
(4 rating, 1 votes)
Loading...

Harish Poonjaಬೆಳ್ತಂಗಡಿ : ಬೆಳ್ತಂಗಡಿಯ ವಿಧಾನ ಸಭಾ ಕ್ಷೇತ್ರಕ್ಕೆ  ಬಿಜೆಪಿ ಅಭ್ಯರ್ಥಿಯಾಗಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ, ಯುವ ರಾಜಕಾರಣಿ, ಹಾಗೂ ಉದ್ಯಮಿ ಹರೀಶ್ ಪೂಂಜ ಸೋಮವಾರ ನಾಮಪತ್ರ  ಸಲ್ಲಿಸಲಿದ್ದಾರೆ .

ಜಿಲ್ಲಾ ಬಿಜೆಪಿ ಯುವಮೋರ್ಚಾದ ಅಧ್ಯಕ್ಷರಾಗುವ ಮೂಲಕ ರಾಜಕೀಯ ಪ್ರವೇಶಿಸಿದ ಅವರು ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು,  ಎಬಿವಿಪಿ ಮೂಲಕ ವಿದ್ಯಾರ್ಥಿ ಹೋರಾಟ ಕ್ಷೇತ್ರದಲ್ಲಿ ಸಂಘಟನಾ ಚತುರತೆ ಮೆರೆದಿರುವ ಅವರು ಬೆಳ್ತಂಗಡಿ ತಾಲ್ಲೂಕಿನ ಮಾತ್ರವಲ್ಲದೇ ಹಲವಾರು ದೇವಸ್ಥಾನಗಳ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವದಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ್ದಾರೆ. ಎ.ಬಿ.ವಿ.ಪಿ ತಾಲೂಕು ಪ್ರಮುಖ್ ಆಗಿ, ಜಿಲ್ಲಾ ಸಂಚಾಲಕರಾಗಿ, ರಾಜ್ಯ ಸಹ ಕಾರ್ಯದರ್ಶಿಯಾಗಿ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಹಾಗೂ ಅನೇಕ ಸ್ಥಾನಗಳು ಹರೀಶ್ ಪೂಂಜ ಅವರಿಗೆ ಒಲಿದು ಬಂದಿದೆ.

ಕಾನೂನು  ಪದವಿಯ  ಹೊಂದಿರುವ ಪೂಂಜಾ ರಾಜ್ಯ ಉಚ್ಚನ್ಯಾಯಾಲಯದಲ್ಲಿ ವಕೀಲರಾಗಿ, ಜೊತೆಗೆ ಓರ್ವ ಉದ್ಯಮಿಯಾಗಿಯೂ ಬೆಳೆದು ಬಂದಿದ್ದು ಧಾರ್ಮಿಕ ಕ್ಷೇತ್ರದ ಮೂಲಕ ದೇವಸ್ಥಾನ ಅಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಸಿಕೊಂಡು ತಾಲೂಕಿನ ಮೂಲೆ ಮೂಲೆಗಳಲ್ಲೂ ತನ್ನದೇ ಆದ ಯುವ ಪಡೆ ಮತ್ತು ಅಭಿಮಾನಿಗಳನ್ನು ಬೆಳೆಸಿಕೊಂಡಿದ್ದಾರೆ.

ಸೋಮವಾರ ಎ.23 ರಂದು ಹರೀಶ್ ಪೂಂಜ ಅವರು ನಾಮಪತ್ರ ಸಲ್ಲಿಸಿ, ನಂತರ ಕಾರ್ಯಕರ್ತರ ಬಹಿರಂಗ ಸಭೆಯನ್ನು ನಡೆಸಲಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English