ಮುಂದಿನ ಬಾರಿ ಸ್ಪರ್ಧಿಸಲ್ಲ: ಶಕುಂತಳಾ ಶೆಟ್ಟಿ

12:38 PM, Thursday, May 17th, 2018
Share
1 Star2 Stars3 Stars4 Stars5 Stars
(No Ratings Yet)
Loading...

shakuntala-shettyಪುತ್ತೂರು: ಮುಂದಿನ ಬಾರಿಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಹೊಸ ಅಭ್ಯರ್ಥಿಯನ್ನು ನಿಲ್ಲಿಸಿ, ಗೆಲ್ಲಿಸಲಾಗುವುದು. ತಾನು ಸ್ಪರ್ಧಿಸುವುದಿಲ್ಲ ಎಂದು ಶಾಸಕಿ ಶಕುಂತಳಾ ಶೆಟ್ಟಿ ಘೋಷಿಸಿದ್ದಾರೆ.

ಪುತ್ತೂರು ಖಾಸಗಿ ಬಸ್‌ ನಿಲ್ದಾಣ ಸಮೀಪದ ಕಾಂಗ್ರೆಸ್‌ ಕಚೇರಿಯಲ್ಲಿ ಬುಧವಾರ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಇದುವರೆಗೆ ನಾಲ್ಕು ಸಲ ಸೋತಿದ್ದೇನೆ. ಈ ಸೋಲಿನಿಂದ ಕಂಗೆಟ್ಟಿಲ್ಲ. ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವೆ. ಸದ್ಯದಲ್ಲೇ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶ ನಡೆಸುತ್ತೇನೆ ಎಂದರು. ಯಾರಿಗೂ ನೋವು ಕೊಡಬೇಡಿ, ಅಕ್ರಮಗಳಲ್ಲಿ ಭಾಗಿಯಾಗಬೇಡಿ ಎಂದು ಕಾರ್ಯಕರ್ತರಿಗೆ ಕಿವಿಮಾತನ್ನೂ ಹೇಳಿದರು.

ಬೆದ್ರಾಳ ಬಳಿ ಶಕುಂತಳಾ ಶೆಟ್ಟಿ ಜಾಗ ಮಾಡಿದ್ದಾರೆ ಎಂಬ ರಾಜೇಶ್‌ ಬೆದ್ರಾಳ ಆರೋಪಕ್ಕೆ ಪ್ರತಿಕ್ರಿಯಿಸಿದ ಶೆಟ್ಟಿ, ಅವರು ತೋರಿಸಿದರೆ, ಆ ಜಾಗವನ್ನು ಅವರಿಗೇ ಕೊಡುತ್ತೇನೆ ಎಂದು ಸವಾಲೆಸೆದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English