ಉಡುಪಿ: ಜಮೀರ್ ಅಹ್ಮದ್, ಖಾದರ್ಗೆ ನಾಲಾಯಕ್ ಅಂದಿದ್ದ ತನ್ವೀರ್ ಗೆ ಸಚಿವ ಯು.ಟಿ ಖಾದರ್ ಅವರು ತಿರುಗೇಟು ನೀಡಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಸಚಿವ ಯು.ಟಿ ಖಾದರ್ ಅವರು ಮಂತ್ರಿಯಾಗಿ ನಾನು ಸಮುದಾಯ ನೋಡದೆ ಕೆಲಸ ಮಾಡಿದ್ದೇನೆ. ಮುಸ್ಲಿಂ ಸಮುದಾಯ ಯಾರೊಬ್ಬರ ಕಿಸೆಯಲ್ಲಿಲ್ಲ ಎಂದು ಹೇಳಿದರು.
ಈ ಹಿಂದೆ ಖಾತೆಗಳನ್ನು ಕಪ್ಪುಚುಕ್ಕೆ ಇಲ್ಲದೆ ನಿಭಾಯಿಸಿದ್ದೇನೆ.ನಾಲಾಯಕ್ ಯಾರು ಅಂತ ಜನ ತೀರ್ಮಾನ ಮಾಡುತ್ತಾರೆ.ಪಕ್ಷದ ಹೈಕಮಾಂಡ್ಗೆ ನಮ್ಮ ಸಾಮರ್ಥ್ಯ ಗೊತ್ತಿದೆ ಎಂದು ಹೇಳಿದ್ದಾರೆ.
ನನ್ನ ಮೇಲೆ ತನ್ವೀರ್ಗೆ ಪ್ರೀತಿ ಜಾಸ್ತಿ.ನಾನು ಯಾರ ಸಚಿವ ಸ್ಥಾನಕ್ಕೂ ಕಲ್ಲು ಹಾಕಿಲ್ಲ, ಪಕ್ಷದ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿಕೆಗೆ ಖಾದರ್ ತಿರುಗೇಟು ನೀಡಿದ್ದಾರೆ.
Click this button or press Ctrl+G to toggle between Kannada and English