ಪುತ್ತೂರು : ವಿದ್ಯಾಪುರ ಜನವಸತಿ ಕಾಲೋನಿಯ ಮಹಿಳೆಯೊಬ್ಬರು ಶನಿವಾರ ಬೆಳಗ್ಗಿನ ಜಾವ ಹೃದಯಾಘಾತದಿಂದ ಮರಣ ಹೊಂದಿದ್ದು ಅವರ ಅಂತಿಮ ಸಂಸ್ಕಾರವನ್ನು ಸಂಭಂದಿಕರ ಅನುಪಸ್ಥಿತಿಯಲ್ಲಿ ನೆರೆ ಹೊರೆಯ ಯುವಕರು ನೆರವೇರಿಸಿದರು.
ಹುಟ್ಟುವಾಗ ಹಿಂದುವಾಗಿ ಹುಟ್ಟಿದ ಭವಾನಿ ಅವರ ಅಂತಿಮ ಸಂಸ್ಕಾರವನ್ನು ಮುಸ್ಲಿಂ ಬಾಂದವರು ಹಿಂದೂ ಸಂಪ್ರದಾಯದಂತೆ ಪುತ್ತೂರಿನ ರುದ್ರ ಭೂಮಿಯಲ್ಲಿ ನೆರವೇರಿಸಿದರು .
ಭವಾನಿಯವರ ಮೃತ ದೇಹವನ್ನು ಮಣ್ಣು ಮಾಡಲು ಸಂಭಂದಿಕರು ಮುಂದೆ ಬರದೇ ಇದ್ದ ಪರಿಸ್ಥಿತಿಯಲ್ಲಿ ಸ್ಥಳೀಯ ಅಂಗನವಾಡಿ ಟೀಚರ್ ರಾಜೇಶ್ವರಿ ಮತ್ತು ಇತರರು ಸೇರಿ ಸೇರಿ ಹಣ ಸಂಗ್ರಹಿಸಿ ಅಂತ್ಯ ಸಂಸ್ಕಾರಕ್ಕೆ ಬೇಕಾಗುವ ಎಲ್ಲಾ ವಸ್ತುಗಳನ್ನು ತಂದು ಅಂತಿಮ ವಿಧಿ ವಿಧಾನ ನೆರವೇರಿಸಿದರು.
Click this button or press Ctrl+G to toggle between Kannada and English