ಉಜಿರೆ : ತಮ್ಮ ತಲೆಯ ಕೂದಲನ್ನು ಕೈಯಿಂದ ಎಳೆದು ತೆಗೆದ ವೀರ ಸಾಗರ ಮುನಿ

9:03 PM, Friday, July 6th, 2018
Share
1 Star2 Stars3 Stars4 Stars5 Stars
(No Ratings Yet)
Loading...

Sagara Muniಉಜಿರೆ: ಹೊಸ್ಮಾರಿನ ಸಿದ್ದರವನ ಕ್ಷೇತ್ರದಲ್ಲಿ ಶುಕ್ರವಾರ ವೀರ ಸಾಗರ ಮುನಿ ಮಹಾರಾಜರ ಕೇಶಲೋಚನ ಕಾರ್ಯಕ್ರಮ ನಡೆಯಿತು.

ಜೈನಧರ್ಮದ ಸಂಪ್ರದಾಯದಂತೆ ದಿಗಂಬರ ಮುನಿಗಳು ತಮ್ಮ ತಲೆಯ ಕೂದಲನ್ನು ಕೈಯಿಂದ ಎಳೆದು ತೆಗೆಯುವುದಕ್ಕೆ ಕೇಶಲೋಚನ ಎನ್ನುತ್ತಾರೆ. ಊರ-ಪರವೂರ ಶ್ರಾವಕ – ಶ್ರಾವಕಿಯರು ಪವಿತ್ರ ಕಾರ್ಯವನ್ನು ವೀಕ್ಷಿಸಿದರು.

ಚಾತುರ್ಮಾಸ: 108 ಶ್ರೀ ವೀರ ಸಾಗರ ಮುನಿ ಮಹಾರಾಜರು ಕಾರ್ಕಳದಲ್ಲಿ ಚಾತುರ್ಮಾಸ ವೃತಾಚರಣೆ ಮಾಡಲಿದ್ದು ಇದೇ 11 ರಂದು ಬುಧವಾರ ಕಾರ್ಕಳ ಪುರಪ್ರವೇಶ ಮಾಡಲಿದ್ದಾರೆ.

ಕಾರ್ಕಳದ ಜೈನಮಠದ ಲಲಿತಕೀರ್ತಿ ಭಟ್ಟಾರಕರ ನೇತೃತ್ವದಲ್ಲಿ ವಿವಿಧ ಸಮಿತಿಗಳನ್ನು ರಚಿಸಿದ್ದು ಭರದಿಂದ ಸಿದ್ಧತೆಗಳು ನಡೆಯುತ್ತಿವೆ.

Sagara Muni

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English