ಸಿದ್ದಾಪುರ ಅಪಘಾತದಲ್ಲಿ ಫೇಸ್ ಬುಕ್ ಪ್ರೇಮಿ ಬಲಿ, ಪ್ರೇಯಸಿ ಜೀವನ್ಮರಣ ಹೋರಾಟ

9:46 AM, Tuesday, July 10th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

prasannaಕುಂದಾಪುರ : ಸಿದ್ದಾಪುರ ಸಮೀಪದ ಬಾಳೆಬರೆ ಘಾಟಿ ವ್ಯಾಪ್ತಿಯ ಮಾಸ್ತಿಕಟ್ಟೆ ಹತ್ತಿರ ಸೋಮವಾರ ಸಂಜೆ ಸಂಭವಿಸಿದ ಬೈಕ್ ಮತ್ತು ಬಸ್ ಡಿಕ್ಕಿಯಲ್ಲಿ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟು, ಯುವತಿಯನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಿರುಪತಿಗೆ ತೇರಳುತ್ತಿದ್ದ ಬಸ್ ಗೆ ಮುಖ ಮುಖಿ ಡಿಕ್ಕಿಯಾಗಿ  ಸ್ಥಳದಲ್ಲೆ ಬೈಕ್ ಸವಾರ ಮೃತಪಟ್ಟಿದ್ದಾನೆ.

ಪ್ರಸನ್ನ ಶೆಟ್ಟಿ (26)ಅರ್ಪಿತಾ ಶೆಟ್ಟಿ (23) ಅಪಘಾತಕ್ಕೆ ಈಡಾದವರು. ಅರ್ಪಿತಾ ಸಿದ್ದಾಪುರ ಆಜ್ರಿ ಗ್ರಾಮದ ಯುವತಿ ಸೀತಾರಾಮ ಶೆಟ್ಟಿ ಪುತ್ರಿ. ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಪೇಸ್ ಬುಕ್ ಪ್ರೇಮಿಗಳು ಎಂದು ಹೇಳಲಾಗಿದೆ. ಪ್ರಸನ್ನ ಶೆಟ್ಟಿ ಹಾಗೂ ಅರ್ಪಿತಾ ಶೆಟ್ಟಿ ಸಿದ್ದಾಪುರ ಕಡೆಯಿಂದ ಬೈಕಿನಲ್ಲಿ ಮಾಸ್ತಿಕಟ್ಟೆ ಕಡೆಗೆ ಪ್ರಯಾಣಿಸುತ್ತಿದ್ದರು.  prasanna-2

prasanna-3ಇದೇ ಸಂದರ್ಭ ತಿರುಪತಿ ಯಾತ್ರೆ ಮುಗಿಸಿ ವಾಪಾಸು ಬರುತಿದ್ದ ಟೂರಿಸ್ಟ್ ಬಸ್ಸು ಎದುರಿನಿಂದ ಬರುತಿತ್ತು. ಮಳೆಯೂ ಬರುತ್ತಿದ್ದರಿಂದ ಬೈಕ್ ಸವಾರನಿಗೆ ಎದುರಿನ ಇಳಿಚಾರು ತಿರುವಿನಲ್ಲಿ ಬರುತಿದ್ದ ಬಸ್ ಗಮನಕ್ಕೆ ಬರಲಿಲ್ಲ ಎನ್ನಲಾಗಿದೆ.

ಪ್ರಸನ್ನ ಶೆಟ್ಟಿ ಕುಂದಾಪುರದ ಇಡೂರು ಮೂಲದ ಯುವಕ. ವಿದೇಶದಲ್ಲಿ ಕೆಲಸ ಮಾಡುತ್ತಿ ಪ್ರಸನ್ನ ಶೆಟ್ಟಿ. ಕೆಲವೇ ದಿನಗಳ ಹಿಂದೆ ಆತನ ಸಹೋದರ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರ ಹಿನ್ನಲೆಯಲ್ಲಿ ಊರಿಗೆ ಬಂದಿದ್ದರು.

prasanna-4ಅರ್ಪಿತಾ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು ವಿಧ್ಯಾರ್ಥಿನಿ. ಅರ್ಪಿತಾ ಮಣಿಪಾಲ್ ಆಸ್ಪತ್ರೆಗೆ ದಾಖಲಾದ್ದು ಜೀವನ್ಮರಣ ಹೋರಾಟದಲ್ಲಿದ್ದರೆ.

ಕಳೆದ ಕೆಲವು ದಿನಗಳಿಂದ ಕರಾವಳಿ ಯಾದ್ಯಂತ ಹಲವು ರಸ್ತೆ ಅಪಘಾತಗಳು ನಡೆಯುತಿದ್ದು ಅಪಾರ ಸಾವು ನೋವು ಸಂಭವಿ ಸುತ್ತಿರುವ ವರದಿಯಾಗುತ್ತಿರುವಾಗಲೇ ಕರಾವಳಿಯ ಮತ್ತೊಂದು ಯುವಕನ ಬಲಿಯಾಗಿದೆ.

ಅಮವಾಸೆ ಬೈಲು ಗ್ರಾಮಂತರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English