ನಗರದ 2,641.15 ಲಕ್ಷ ರೂ.ಗಳ ಕಾಮಗಾರಿಗಳನ್ನು ಪರಿಶೀಲಿಸಿದ ಮೇಯರ್ ತಂಡ

9:06 PM, Thursday, July 12th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Mayor ಮಂಗಳೂರು : ಮಹಾನಗರ ಪಾಲಿಕೆ  ಮೇಯರ್ ಭಾಸ್ಕರ ಮೊಯ್ಲಿ, ಸ್ಥಾಯಿ ಸಮಿತಿ ಉಪ ಮೇಯರ್ ಹಾಗೂ ಆಯುಕ್ತ ಮುಹಮ್ಮದ್ ನಝೀರ್   ಹಾಗೂ ಹಿರಿಯ ಅಧಿಕಾರಿಗಳನ್ನು ಒಳಗೊಂಡ ತಂಡ ನಗರದ ವಿವಿಧ ಕಡೆಗಳಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪರಿಶೀಲಿಸಿತು.

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ, ಕಾಂಕ್ರಿಟೀಕರಣ, ಸೇತುವೆ ನಿರ್ಮಾಣ, ಫುಟ್‌ಪಾತ್ ಅಭಿವೃದ್ಧಿ ಸೇರಿದಂತೆ 2,641.15 ಲಕ್ಷ ರೂ.ಗಳ ಕಾಮಗಾರಿಗಳು ಪ್ರಗತಿಯಲ್ಲಿದೆ.

ವಾಮಂಜೂರು- ಬೊಂದೇಲ್ ಸಂಪರ್ಕ ರಸ್ತೆ , ಪಚ್ಚನಾಡಿ  ಸೇತುವೆ, ಕದ್ರಿ ಪಾರ್ಕ್, ಬಳ್ಳಾಲ್‌ಬಾಗ್‌ನಿಂದ ದುರ್ಗಾ ಮಹಲ್‌ ಫುಟ್‌ಪಾತ್‌, ಪಡೀಲ್- ಬಜಾಲ್ ರಸ್ತೆ, ಕಂಕನಾಡಿ ರೈಲ್ವೇ ನಿಲ್ದಾಣ ರಸ್ತೆ , ಕಂಕನಾಡಿ – ಕೋಟಿ ಚನ್ನಯ ವೃತ್ತ, ಮಂಗಳಾ ಈಜುಕೊಳ ಮೊದಲಾದ ಕಾಮಗಾರಿಗಳನ್ನು ವೀಕ್ಷಿಸಿದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English