ಮರದ ಮೇಲಿದ್ದ ಮೃತ್ಯು ಬೈಕ್ ಮೇಲೆರಗಿದಾಗ ಏನಾಯ್ತು ನೋಡಿ

1:20 AM, Sunday, July 15th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Yellapura accident ಕಾರವಾರ : ರಾಷ್ಟ್ರೀಯ ಹೆದ್ದಾರಿ 63ರ ಬಿರಗದ್ದೆ ಕ್ರಾಸ್ ಬಳಿ ಚಲಿಸುತ್ತಿದ್ದ ಬೈಕ್ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ  ಶನಿವಾರ ನಡೆದಿದೆ.

ಮೃತ್ಯು ಈ ಅಮಾಯಕ ಬೈಕ್ ಸವಾರರನ್ನೇ ಕಾಯುತಿತ್ತೆನೋ. ಅಂಕೋಲಾ ತಾಲೂಕಿನ ಕನಕನಹಳ್ಳಿ ಗ್ರಾಮದ ಸುಭಾಶ್ ಚಿಪ್ಕರ್ (50) ಹಾಗೂ ನಾಗರಾಜ್ ಸಲಗಾವ್ಕರ್(25) ಯಲ್ಲಾಪುರದಿಂದ‌ ಅಂಕೋಲಾ ಕಡೆಗೆ ತೆರಳುತಿದ್ದಾಗ ಬೈಕ್ ಮೇಲೆ ಮರ ಬಿದ್ದಿದೆ.  ಸಾವು ಸಮೀಪ ವಿದ್ದರೂ ಅವರಿಗೆ ಗೊತ್ತಾಗಲೇ ಇಲ್ಲ, ತಪ್ಪಿಸಿಕೊಳ್ಳಲೂ ಆಗಲಿಲ್ಲ ಅವರು ಸ್ಥಳದಲ್ಲೇ  ಕೊನೆಯುಸಿರೆಳೆದರು.

ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಬಿಡದೆ ಗಾಳಿ ಮಳೆಯಾಗುತಿದ್ದು, ಶನಿವಾರವೂ ಮಳೆಗಾಳಿಯ ಆರ್ಭಟ ಜೋರಾಗಿತ್ತು. ಗಾಳಿ ಮಳೆಯಿಂದ ಮರ ಬಿದ್ದು ಈ ದುರ್ಘಟನೆ ಸಂಭವಿಸಿದೆ.

ಯಲ್ಲಾಪುರ ಠಾಣೆ ಪೊಲೀಸರು ಭೇಟಿ ನೀಡಿ ಕೇಸು ದಾಖಲಿಸಿ ಕೊಂಡಿದ್ದಾರೆ.

Yellapura accident

Yellapura accident

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English