ಸಚಿವ ಯು.ಟಿ ಖಾದರ್ ಉಡುಪಿಗೆ ಭೇಟಿ..ಸ್ವಾಮೀಜಿ ಸಮಾಧಿಗೆ ನಮನ!

5:18 PM, Friday, July 20th, 2018
Share
1 Star2 Stars3 Stars4 Stars5 Stars
(No Ratings Yet)
Loading...

u-t-kadherಉಡುಪಿ: ಶೀರೂರು ಶ್ರೀಲಕ್ಷ್ಮೀವರ ಸ್ವಾಮೀಜಿ ಅಕಾಲಿಕ ನಿಧನದ ಬಳಿಕ ಉಡುಪಿಗೆ ಭೇಟಿ ನೀಡಿದ್ದ ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಅವರು ಸ್ವಾಮೀಜಿ ಸಮಾಧಿಗೆ ನಮನ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು, ನಾನು‌ ಆತ್ಮೀಯತೆಯಿಂದ ಸಹೋದರತೆಯಿಂದ ಇಲ್ಲಿಗೆ ಆಗಮಿಸಿದ್ದೇನೆಯೇ ಹೊರತು ಸರ್ಕಾರದ ಪ್ರತಿನಿಧಿಯಾಗಲ್ಲ. ಅಷ್ಟೇ ಅಲ್ಲದೆ, ಶೀರೂರು ಶ್ರೀಗಳೊಂದಿಗೆ ಮೊದಲಿನಿಂದಲೂ ಒಡನಾಟ ಹೊಂದಿದ್ದೆ. ಅವರ ಅಂತ್ಯಸಂಸ್ಕಾರದ ವೇಳೆ ಬರಲು ಸಾಧ್ಯವಾಗದ ಹಿನ್ನಲೆ ಇಂದು ಆಗಮಿಸಿ ಸಮಾಧಿಗೆ ಸಮನ ಸಲ್ಲಿಸಿರುವುದಾಗಿ ತಿಳಿಸಿದರು.

ಶ್ರೀಗಳ ಸಾವಿನ ವಿಷಯಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು, ಹೆಚ್ಚಿನ ತನಿಖೆ ಅಗತ್ಯವಿದ್ದಲ್ಲಿ ಇಲಾಖೆಗೆ ಅನುಮತಿ ನೀಡಲಿದೆ ಎಂದು ತಿಳಿಸಿದರು. ಈ ವೇಳೆ ಮಾಜಿ‌ ಸಚಿವರುಗಳಾದ ಪ್ರಮೋದ್ ಮಧ್ವರಾಜ್ ಹಾಗೂ ಅಭಯ್ ಚಂದ್ರ ಜೈನ್ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English