ಕರ್ನಾಟಕ ಒಂದೇ, ಅದರಲ್ಲಿ ಮೊದಲ ಕರ್ನಾಟಕ ಎರಡನೇ ಕರ್ನಾಟಕ ಅನ್ನೋದೇನಿಲ್ಲ: ಡಾ.ಜಿ ಪರಮೇಶ್ವರ್

2:48 PM, Thursday, July 26th, 2018
Share
1 Star2 Stars3 Stars4 Stars5 Stars
(No Ratings Yet)
Loading...

g.parameshwarಬೆಂಗಳೂರು: ಕರ್ನಾಟಕ ಒಂದೇ, ಅದರಲ್ಲಿ ಮೊದಲ ಕರ್ನಾಟಕ ಎರಡನೇ ಕರ್ನಾಟಕ ಅನ್ನೋದೇನಿಲ್ಲ. ನಮ್ಮದು ಅಖಂಡ ಕರ್ನಾಟಕ ಎಂದು ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ 114 ತಾಲೂಕುಗಳ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿದ್ದೇವೆ. ರಾಜ್ಯ ಸರ್ಕಾರದ ಹೋರಾಟದ ಫಲವಾಗಿಯೇ 6 ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ಸಿಕ್ಕಿದೆ. ಇದನ್ನೆಲ್ಲ ಗಮನಿಸಬೇಕು. ಯಾವುದೇ ಕಾರಣಕ್ಕೂ ರಾಜ್ಯ ವಿಭಜನೆಯ ಮಾತುಗಳನ್ನು ಆಡಬಾರದು ಎಂದು ಮನವಿ ಮಾಡಿದರು.

ನಮಗೆ ಉತ್ತರ ಕರ್ನಾಟಕ ಅಭಿವೃದ್ಧಿ ಬೇಡ ಅಂತಾದರೆ ಉತ್ತರ ಕರ್ನಾಟಕಕ್ಕೆ ನೀರಾವರಿ ಯೋಜನೆಗಳನ್ನು ನೀಡುತ್ತಿರಲಿಲ್ಲ. ಸಿಎಂ ಯಾವ ಸಂದರ್ಭದಲ್ಲಿ ಯಾವ ಮಾತುಗಳನ್ನಾಡಿದ್ದಾರೋ ಗೊತ್ತಿಲ್ಲ. ಆದರೆ ಅಖಂಡ ಕರ್ನಾಟಕದ ಅಭಿವೃದ್ಧಿ ನಮ್ಮ ಸಂಕಲ್ಪವಾಗಿದೆ ಎಂದು ಪರಮೇಶ್ವರ್ ಹೇಳಿದರು.

ಬಂದ್ಗೆ ಕರೆ ಕೊಟ್ಟವರಿಗೆ ಬಂದ್ ಮಾಡದಂತೆ ಮನವಿ ಮಾಡುತ್ತೇವೆ. ನಾವೇನೂ ಕೇವಲ ಮಧ್ಯ ಕರ್ನಾಟಕಕ್ಕೆ ಮಾತ್ರ ಸಾಲ ಮನ್ನಾ ಮಾಡಿಲ್ಲ. ಯಾವ ಅರ್ಥದಲ್ಲಿ ಸಿಎಂ ಉತ್ತರ ಕರ್ನಾಟಕದವರು ಓಟು ಹಾಕಿಲ್ಲ ಅಂತ ಹೇಳಿದ್ದಾರೆ ಗೊತ್ತಿಲ್ಲ. ಆದರೆ ಕರ್ನಾಟಕವನ್ನು ವಿಂಗಡಿಸುವ ಯೋಚನೆಯನ್ನು ಕೈಬಿಡಬೇಕು ಎಂದು ಮನವಿ ಮಾಡಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English