ಮಂಗಳೂರು: ಮಂಗಳೂರು ಹೊರವಲಯದ ಪರಂಗಿಪೇಟೆಯ ಬಳಿ ನಡೆದಿದ್ದ ನೈತಿಕ ಪೊಲೀಸ್ ಗಿರಿ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ನಾಲ್ವರು ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪರಂಗಿಪೇಟೆ ಮಸೀದಿ ಬಳಿಯ ನಿವಾಸಿ, ಆಟೋಚಾಲಕ ಉಮರ್ ಫಾರುಕ್ (36), ಅಮ್ಮೆಮಾರ್ ನಿವಾಸಿಗಳಾದ ಅರ್ಫಾತ್ (28), ಮೊಹಮ್ಮದ್ ಅಫ್ರಿದ್ (21), ಆಟೊ ಚಾಲಕ ಮೊಹಮ್ಮದ್ ಇಕ್ಬಾಲ್ (32) ಬಂಧಿತ ಆರೋಪಿಗಳು.
ಆರೋಪಿಗಳು ಜುಲೈ 29ರಂದು ಫರಂಗಿಪೇಟೆಯಲ್ಲಿ ಉಡುಪಿ ಕೋಟ ಮೂಲದ ಸುರೇಶ್ ಎಂಬವರ ಮೇಲೆ ಹಲ್ಲೆನಡೆಸಿದ್ದರು. ಪ್ರಕರಣದ ಕುರಿತಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ದೂರು ದಾಖಲಾಗಿತ್ತು. ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡ ಇನ್ನುಳಿದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
Click this button or press Ctrl+G to toggle between Kannada and English