ಯುವಕ ಎಮ್ಮೆ ಮೈ ತೊಳೆಯಲು ಹೋಗಿ ನದಿಪಾಲು

11:55 AM, Tuesday, September 18th, 2018
Share
1 Star2 Stars3 Stars4 Stars5 Stars
(No Ratings Yet)
Loading...

mandyaಮಂಡ್ಯ: ಎಮ್ಮೆ ಮೈ ತೊಳೆಯಲು ಹೋಗಿ ಯುವಕ ಸಾವಿಗೀಡಾದ ಘಟನೆ ಮಳವಳ್ಳಿ ತಾಲೂಕಿನ ಬೆಳತೂರು ಗ್ರಾಮದಲ್ಲಿ ನಡೆದಿದೆ.

ಬೆಳತೂರು ಗ್ರಾಮದ ಲೋಕೇಶ್ (19 ವರ್ಷ) ಮೃತ ಯುವಕ. ಎಮ್ಮೆಯ ಮೈ ತೊಳೆಯಲು ಶಿಂಷಾ ನದಿಗೆ ಇಳಿದಿದ್ದಾಗ ಇದ್ದಕ್ಕಿದ್ದಂತೆ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಪರಿಣಾಮ ನದಿಯ ರಭಸಕ್ಕೆ ಯುವಕ ಕೊಚ್ಚಿ ಹೋಗಿದ್ದ.

ಬಳಿಕ ಅಗ್ನಿ ಶಾಮಕ ಸಿಬ್ಬಂದಿಯ ಸಹಾಯದಿಂದ ಶವವನ್ನು ಹೊರ ತೆಗೆಯಲಾಯಿತು.
ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English