ಯೋಗ ಗುರು ಬಾಬಾ ರಾಮದೇವ್ ಮುಖಕ್ಕೆ ಮಸಿ ಎಸೆದ ಕಮ್ರಾನ್ ಸಿದ್ದಿಕಿ

8:11 PM, Saturday, January 14th, 2012
Share
1 Star2 Stars3 Stars4 Stars5 Stars
(No Ratings Yet)
Loading...

Baba Ramdev

ನವದೆಹಲಿ : ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ  ಯೋಗ ಗುರು ಬಾಬಾ ರಾಮದೇವ್ ಅವರ ಮುಖಕ್ಕೆ ಮಸಿ ಎಸೆದ ಪ್ರಕರಣ ಶನಿವಾರ ಮಧ್ಯಾಹ್ನ ನಡೆದಿದೆ.

ಮುಂಬರುವ ಚುನಾವಣೆ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಲು ಬಾಬಾ ರಾಮದೇವ್ ಈ ಸುದ್ದಿಗೋಷ್ಠಿ ಕರೆದಿದ್ದರು. ಆ ವೇಳೆ ಅವರ ವಿರುದ್ಧ ಹಲವರು ಪ್ರತಿಭಟನೆ ನಡೆಸಿ, ಘೋಷಣೆ ಕೂಗತೊಡಗಿದ್ದರು. ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ರಾಮದೇವ್ ಅವರ ಮುಖಕ್ಕೆ ಮಸಿ ಎಸೆದ, ಅತನನ್ನು ರಾಮದೇವ್ ಬೆಂಬಲಿಗರು ದಾಳಿ ನಡೆಸಿ ಥಳಿಸಿದ್ದಾರೆ. ರಾಮದೇವ್ ಅವರನ್ನು ಸ್ಥಳದಿಂದ ಬೇರೆಡೆಗೆ ಕರೆದೊಯ್ಯಲಾಗಿದೆ.

ಈ ರೀತಿ ಬೆದರಿಕೆ, ದಾಳಿಗೆ ನಾನು ಎದುರುವುದಿಲ್ಲ. ನನ್ನ ಹೋರಾಟ ಮುಂದುವರೆಯಲಿದೆ ಎಂದು ಬಾಬಾ ರಾಮದೇವ್ ಪ್ರತಿಕ್ರಿಯಿಸಿದ್ದಾರೆ. ವಿದೇಶಗಳಲ್ಲಿರುವ ಕಪ್ಪುಹಣವನ್ನು ಭಾರತಕ್ಕೆ ತರುವಂತೆ ಕೇಳಿದ್ದೇ ತಪ್ಪಾಗಿದೆ ಎಂದು ಅವರು ಹೇಳಿದರು.

ಬಾಬಾ ರಾಮದೇವ್ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯನ್ನು ರಿಯಲ್ ಕಾಸ್ ಎಂಬ ಸರ್ಕಾರೇತರ ಸಂಸ್ಥೆ ನಡೆಸುವ ಕಮ್ರಾನ್ ಸಿದ್ದಿಕಿ ಎಂದು ಗುರುತಿಸಲಾಗಿದೆ ಎಂದು ಎಎನ್ ಐ ವರದಿ ಮಾಡಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English