ಡಿವೈಎಫ್ಐ ಮುಖಂಡನ ಮೇಲೆ ಹಲ್ಲೆ ಆರೋಪ: ಮುಖ್ಯ ಪೇದೆ ಅಮಾನತು

11:17 AM, Saturday, October 20th, 2018
Share
1 Star2 Stars3 Stars4 Stars5 Stars
(No Ratings Yet)
Loading...

leaderಮಂಗಳೂರು: ಡಿವೈಎಫ್ಐ ಮುಖಂಡ ರಿಯಾಜ್ ಮಾಂತೂರು ಮತ್ತು ಅವರ ಸಹೋದರ ಇರ್ಷಾದ್ ಎಂಬವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ವೇಣೂರು ಠಾಣಾ ಮುಖ್ಯ ಪೇದೆ ತಾರನಾಥ ಅವರನ್ನು ಅಮಾನತು ಮಾಡಲಾಗಿದೆ.

ತಾರನಾಥ ಅವರನ್ನು ಅಮಾನತು ಮಾಡಿ ದ.ಕ ಜಿಲ್ಲಾ ಎಸ್ಪಿ ರವಿಕಾಂತೇಗೌಡ ಅವರು ಇಲಾಖಾ ತನಿಖೆಗೆ ಆದೇಶಿಸಿದ್ದಾರೆ. ರಿಯಾಜ್ ಮಾಂತೂರು ಮತ್ತು ಇರ್ಷಾದ್ ಅಕ್ಟೋಬರ್ 2 ರಂದು ವೇಣೂರಿನಲ್ಲಿ ಬೈಕ್ನಲ್ಲಿ ಹೋಗುತ್ತಿದ್ದಾಗ ರಾತ್ರಿ ಪಾಳಿಯಲ್ಲಿದ್ದ ಪೇದೆ ತಾರನಾಥ ಮತ್ತು ಇತರರು ತಡೆದಿದ್ದರು. ರಿಯಾಜ್ ಆ ಸಂದರ್ಭದಲ್ಲಿ ದಾಖಲೆ ತನ್ನ ಬಳಿ ಇಲ್ಲ. ನಾಳೆ ಹಾಜರುಪಡಿಸುವೆ ಎಂದು ತಿಳಿಸಿದರು ಕೂಡ ಪೊಲೀಸರು ಅವಾಚ್ಯ ಶಬ್ದಗಳಿಂದ ನಿಂದಿಸಿ ಠಾಣೆಗೆ ಕರೆದುಕೊಂಡು ಹೋಗಿ ಹಲ್ಲೆಗೈದಿದ್ದರು ಎಂದು ಆರೋಪ ಮಾಡಲಾಗಿತ್ತು.

ಘಟನೆಯನ್ನು ಖಂಡಿಸಿ ಜಿಲ್ಲಾ ಡಿವೈಎಫ್ಐ ಮುಖಂಡರು ಮನವಿ ಸಲ್ಲಿಸಿದ್ದರು. ನ್ಯಾಯಕ್ಕಾಗಿ ಆಗ್ರಹಿಸಿ ಮೂಡಬಿದ್ರೆಯಲ್ಲಿ ಪ್ರತಿಭಟನೆ ಕೂಡ ನಡೆದಿತ್ತು. ಈ ಬಗ್ಗೆ ತನಿಖೆ ನಡೆಸಿದ ದ.ಕ ಜಿಲ್ಲಾ ಎಸ್ಪಿ ಪೇದೆ ತಾರನಾಥ ಅವರನ್ನು ಅಮಾನತುಗೊಳಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English