ಹೋಲಿ ರೋಸರಿ ಕೆಥಡ್ರಲ್‌ನ 450ನೇ ವರ್ಷದ ಸಂಭ್ರಮಾಚರಣೆ ಉದ್ಘಾಟಿಸಲಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ

12:25 PM, Tuesday, November 13th, 2018
Share
1 Star2 Stars3 Stars4 Stars5 Stars
(No Ratings Yet)
Loading...

Rosario ಮಂಗಳೂರು : ದಿ ಹೋಲಿ ರೋಸರಿ ಕೆಥಡ್ರಲ್, ಬೋಳಾರ ಇದರ 450ನೇ ವರ್ಷದ ಸಂಭ್ರಮಾಚರಣೆಯನ್ನು ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಎಚ್. ಡಿ. ಕುಮಾರಸ್ವಾಮಿ, ನವೆಂಬರ್ 18, ರವಿವಾರದಂದು ಉದ್ಘಾಟಿಸಲಿದ್ದಾರೆ. ಈ ಸಮಾರಂಭ ನಗರದ ರೊಸಾರಿಯೋ ಕೆಥಡ್ರಲ್ ಗ್ರೌಂಡ್‌ನಲ್ಲಿ ಸಂಜೆ 6.30ಕ್ಕೆ ನಡೆಯಲಿದೆ.

ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ವಂದನೀಯ ರೆ. ಡಾ. ಪೀಟರ್ ಪೌಲ್ ಸಲ್ದಾನ ಈ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಬಿಷಪ್ ಅತಿ ವಂದನೀಯ ರೆ. ಡಾ. ಅಲೋಶಿಯಸ್ ಪೌಲ್ ಡಿ’ಸೋಜ, ಮಂಗಳೂರು ಧರ್ಮಪ್ರಾಂತ್ಯದ ಪ್ರಧಾನ ಗುರುಗಳು ಆತೀ ವಂ| ಮೋನ್ಸಿಂಜರ್ ಮ್ಯಾಕ್ಸಿಮ್ ನೊರೊನ್ಹಾ, ಕರ್ನಾಟಕ ಪ್ರಾಂತ್ಯದ ಪ್ರೊವಿನ್ಶಿಯಲ್ ರೆ. ಫಾ. ಸ್ಟೇನಿಸ್ಲಾಸ್ ಡಿ’ಸೋಜ ಎಸ್ ಜೆ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ನಗರಾಡಳಿತ ಸಚಿವ ಶ್ರೀ. ಯು. ಟಿ. ಖಾದರ್, ದಕ್ಷಿಣ ಕನ್ನಡ ಸಂಸದ ಶ್ರೀ. ನಳಿನ್ ಕುಮಾರ್ ಕಟೀಲ್, ರಾಜ್ಯಸಭಾ ಸದಸ್ಯ ಶ್ರೀ. ಆಸ್ಕರ್ ಫೆರ್ನಾಂಡಿಸ್ ಹಾಗೂ ಕರ್ನಾಟಕ ವೃತ್ತದ ಸಿಪಿಎಂಜಿ ಡಾ. ಚಾರ್ಲ್ಸ್ ಲೋಬೋ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಶ್ರೀ. ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯರುಗಳಾದ ಶ್ರೀ. ಭೋಜೇ ಗೌಡ, ಶ್ರೀ ಐವನ್ ಡಿ’ಸೋಜ, ಶ್ರೀ. ಬಿ. ಎಂ. ಫಾರೂಖ್, ಮಂಗಳೂರು ಮೇಯರ್ ಶ್ರೀ. ಭಾಸ್ಕರ್ ಕೆ, ಮಂಗಳೂರು ದಕ್ಷಿಣ ಕ್ಷೇತ್ರದ ಮಾಜಿ ಶಾಸಕ ಶ್ರೀ. ಜೆ. ಆರ್. ಲೋಬೋ, ಉದ್ಯಮಿ ಮತ್ತು ದಾನಿ ಶ್ರೀ. ರೊನಾಲ್ಡ್ ಕೊಲಾಸೊ, ಪೋರ್ಟ್ ವಾರ್ಡ್ ಕಾರ್ಪೊರೇಟರ್ ಶ್ರೀ. ಅಬ್ದುಲ್ ಲತೀಫ್, ಸುಪೀರಿಯರ್ ಜನರಲ್‌ಗಳಾದ ಅತಿ ವಂದನೀಯ ಸಿಸ್ಟರ್ ಮೇರಿ ಸುಶೀಲಾ ಎಸಿ ಹಾಗೂ ಅತಿ ವಂದನೀಯ ಸಿಸ್ಟರ್ ಸುಶೀಲಾ ಸಿಕ್ವೇರಾ ಯುಎಫ್‌ಎಸ್, ಡಯೊಸೀಸನ್ ಪ್ಯಾಸ್ಟೋರಲ್ ಪರಿಷದ್ ಕಾರ್ಯದರ್ಶಿ ಶ್ರೀ. ಎಂ. ಪಿ. ನೊರೊನ್ಹಾ ಇವರುಗಳು ಗೌರವಾನ್ವಿತ ಅತಿಥಿಗಳಾಗಿ ಹಾಜರಿರಲಿದ್ದಾರೆ.

ಬಲಿಪೂಜೆ ಆಚರಣೆ : ಉದ್ಘಾಟನಾ ಸಮಾರಂಭಕ್ಕಿಂತ ಮುನ್ನ ರೊಸಾರಿಯೋ ಕೆಥಡ್ರಲ್ ಗ್ರೌಂಡ್‌ನಲ್ಲಿ ಸಂಜೆ 5 ಗಂಟೆಗೆ ನಡೆಯಲಿರುವ ಬಲಿಪೂಜೆ ಆಚರಣೆಯ ಅಧ್ಯಕ್ಷತೆಯನ್ನು ಬೆಂಗಳೂರು ಆರ್ಚ್ ಬಿಷಪ್ ಅತಿ ವಂದನೀಯ ಡಾ. ಪೀಟರ್ ಮಚಾಡೋ ವಹಿಸಲಿದ್ದಾರೆ.

ಮಂಗಳೂರು ಬಿಷಪ್ ಅತಿ ವಂದನೀಯ ಡಾ. ಪೀಟರ್ ಪೌಲ್ ಸಲ್ದಾನ ಅವರು ಧಾರ್ಮಿಕ ಪ್ರವಚನ ನೀಡಲಿದ್ದು, ನಿವೃತ್ತ ಬಿಷಪ್‌ರಾದ ಅತಿ ವಂದನೀಯ ಡಾ ಅಲೋಷಿಯಸ್ ಪೌಲ್ ಡಿಸೋಜ, ಹಾಗೂ ಇತರ ಬಿಷಪ್ ಹಾಗೂ ಧರ್ಮಗುರುಗಳು ಉಪಸ್ಥಿತರಿರಲಿದ್ದಾರೆ.

ಮೂರು ದಿನಗಳ ಧ್ಯಾನ ಮತ್ತು ಆರಾಧನೆ: ಹೋಲಿ ರೋಸರಿ ಕೆಥಡ್ರಲ್ ಇದರ 450ನೇ ವರ್ಷದ ಐತಿಹಾಸಿಕ ಸಂಭ್ರಮಾಚರಣೆಯ ಅಂಗವಾಗಿ ರೊಸಾರಿಯೋ ಕೆಥಡ್ರಲ್ ಗ್ರೌಂಡ್‌ನಲ್ಲಿ ನವೆಂಬರ್ 15,16 ಹಾಗೂ 17ರಂದು ಸಂಜೆ 5ರಿಂದ8  ಗಂಟೆಯ ತನಕ ಮೂರು ದಿನಗಳ ಕಾಲ ಧ್ಯಾನ ಮತ್ತು ಆರಾಧನೆ (ದೇವರ ಸ್ತುತಿ ಮತ್ತು ಪ್ರಾರ್ಥನೆ) ನಡೆಯಲಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English