ಅನಂತ್​ಕುಮಾರ್ ನಿವಾಸಕ್ಕೆ ವೇಣುಗೋಪಾಲ್‌ ಭೇಟಿ!

11:00 AM, Saturday, November 17th, 2018
Share
1 Star2 Stars3 Stars4 Stars5 Stars
(No Ratings Yet)
Loading...

ananth-kumarಬೆಂಗಳೂರು: ಅನಾರೋಗ್ಯದಿಂದ ಮೊನ್ನೆ ನಿಧಾನರಾಗಿದ್ದ ದಿವಂಗತ ಅನಂತ್ಕುಮಾರ್ ರವರ ಬಸನವಗುಡಿಯಲ್ಲಿರುವ ನಿವಾಸಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಭೇಟಿ ನೀಡಿದರು.

ಈ ವೇಳೆ ತೇಜಸ್ವಿನಿ ಅನಂತಕುಮಾರ್ರವರಿಗೆ ಸಾಂತ್ವನ ಹೇಳಿದ ಅವರು, ಪಕ್ಷಾತೀತವಾಗಿ ಅಪಾರ ಸ್ನೇಹಿತರನ್ನು‌ ಅನಂತ್ ಕುಮಾರ್ ಪಡೆದಿದ್ದರು ಎಂದು ಅವರ ನಿಧನಕ್ಕೆ ವೇಣುಗೋಪಾಲ್ ಸಂತಾಪ ಸೂಚಿಸಿದರು.

ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಅಂತಿಮ ನಮನ ಸಲ್ಲಿಸಿದ್ದರು. ಆದರೆ, ವೇಣುಗೋಪಾಲ್ ರಾಜ್ಯದಲ್ಲಿ ಇಲ್ಲದ ಕಾರಣಕ್ಕಾಗಿ‌‌ ಇಂದು ಅನಂತ್ಕುಮಾರ್ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English