ಸಾ.ರಾ.ಗೋವಿಂದ ಪುತ್ರ ಅನೂಪ್ ವಿರುದ್ಧ ಕಿಡ್ನಾಪ್ ಹಾಗೂ ಹಲ್ಲೆ ಆರೋಪ..!

1:15 PM, Tuesday, November 20th, 2018
Share
1 Star2 Stars3 Stars4 Stars5 Stars
(No Ratings Yet)
Loading...

anup-actorಬೆಂಗಳೂರು: ಖ್ಯಾತ ನಿರ್ಮಾಪಕ ಹಾಗೂ ಫಿಲ್ಮ್ ಛೇಂಬರ್ನ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದ ಪುತ್ರ, ನಟ ಅನೂಪ್ ವಿರುದ್ಧ ಕಿಡ್ನಾಪ್ ಹಾಗೂ ಹಲ್ಲೆ ಆರೋಪ ಕೇಳಿ ಬಂದಿದೆ.

ಹರೀಶ್ ಎಂಬಾತನಿಗೆ ತನ್ನ ಮೊಬೈಲ್ನಿಂದ ಕರೆ ಮಾಡಿ ಬಸವೇಶ್ವರ ನಗರದ ಪವಿತ್ರ ಪ್ಯಾರಡೈಸ್ ಬಳಿ ಬರುವಂತೆ ಅನೂಪ್ ಹೇಳಿದ್ದನಂತೆ. ಅಲ್ಲಿಗೆ ಬಂದ ಆತನನ್ನು ಕಿಡ್ನಾಪ್ ಮಾಡಿ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ. ವೈಯಕ್ತಿಕ ದ್ವೇಷ ಇದಕ್ಕೆ ಕಾರಣ ಎಂದು ಹೇಳಲಾಗಿದೆ.

ಇನ್ನು ಅನೂಪ್ನಿಂದ ಎಸ್ಕೇಪ್ ಆದ ಹರೀಶ್, ಸದಾಶಿವನಗರದ ಠಾಣೆಯಲ್ಲಿ ದೂರು ನೀಡಿದ್ದಾನೆ. ಈತನ ದೂರಿನ ಮೇರೆಗೆ ಅನೂಪ್ ವಿರುದ್ಧ ಪೊಲೀಸರು ಸೆಕ್ಷನ್ 323, 342 ಹಾಗೂ 506ರಡಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಮತ್ತೊಂದೆಡೆ ದೂರುದಾರ ಹರೀಶ್ ಪೊಲೀಸರ ಎದುರು ಕಿಡ್ನಾಪ್ ಹಿಂದಿರುವ ಕಾರಣ ಏನು ಅನ್ನೋದು ಬಹಿರಂಗ ಪಡಿಸಿಲ್ಲ ಎಂದು ತಿಳಿದು ಬಂದಿದೆ.
ಪೊಲೀಸರು ಕೂಡ ಈ ಸಂಬಂಧವಾಗಿ ಅನೂಪ್ ಹಾಗೂ ಆತನ ಸ್ನೇಹಿತರನ್ನು ಠಾಣೆಗೆ ಕರೆಯಿಸಿಕೊಂಡು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಅನೂಪ್ ಡವ್ ಎನ್ನುವ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English