ರಾಜ್ಯಪಾಲರನ್ನು ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪ: ಮೂವರ ಬಂಧನ

12:54 PM, Wednesday, November 21st, 2018
Share
1 Star2 Stars3 Stars4 Stars5 Stars
(5 rating, 1 votes)
Loading...

vajubai-valaಬೆಂಗಳೂರು: ರಾಜ್ಯಪಾಲರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಮೂವರನ್ನು ಬಂಧಿಸಿರುವ ಘಟನೆ ಕಬ್ಬನ್ ಪಾರ್ಕ್ನ ಗ್ರಂಥಾಲಯ ಬಳಿ ನಡೆದಿದೆ.

ರಾಜ್ಯಪಾಲರ ಆಗಮನದ ವೇಳೆ ಕಬ್ಬನ್ ಪಾರ್ಕ್ನ ಗ್ರಂಥಾಲಯ ಬಳಿ ವಾಹನಗಳನ್ನು ಪೊಲೀಸರು ತಡೆದಿದ್ದರು. ಈ ವೇಳೆ ಟ್ರಾಫಿಕ್ ಪೊಲೀಸ್ ಪೇದೆಗೆ ಇಂಡಿಕಾ ಕಾರು ಡಿಕ್ಕಿ ಹೊಡದಿದೆ. ಕಾರಿನಲ್ಲಿದ್ದ ಚಾಲಕ ಯಾವನೋ ಹೋಗುವಾಗ ಅವನಿಗೆ ದಾರಿ ಮಾಡಿಕೊಟ್ಟು ನಮ್ಮನ್ನು ಯಾಕ್ ನಿಲ್ಲಿಸ್ತಿಯಾ ಎಂದು ಅವಾಚ್ಯಾ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎನ್ನಲಾಗಿದೆ.

ಕಬ್ಬನ್ ಪಾರ್ಕ್ ಸಂಚಾರಿ ಪೇದೆ ಚಿದಾನಂದ ದೂರಿನ್ವಯ ಟಾಟಾ ಇಡಿಕಾ ಕಾರ್ ಚಾಲಕನ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.ಈ ಸಂಬಂಧ ಕಾರಿನ ಚಾಲಕ ಮತ್ತು ಆತನ ಇಬ್ಬರು ಸ್ನೇಹಿತರನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English